ಮಂಗಳೂರಿನಲ್ಲಿ:ಗುರುವಾರ ರಾತ್ರಿ ನಡೆದ ಕೊಲೆ ಪ್ರಕರಣ!

ಮಂಗಳೂರು ನಗರದ ಹೊರವಲಯದ ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧ  ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿ ಬರುವಂತೆ  ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಆದೇಶ ಹೊರಡಿಸಿದ್ದಾರೆ.

ಜೊತೆಗೆ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಶನಿವಾರ ಮುಂಜಾನೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು,ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದ್ದಾರೆ.
ಜೊತೆಗೆ ಗಡಿ ಪ್ರದೇಶಗಳನ್ನು ಸೇರಿಸಿ ಕಮಿಷನರೇಟ್ ವ್ಯಾಪ್ತಿಯ 19 ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಎಲ್ಲಾ ವಾಹನಗಳ ಮೇಲೆ ನಿಗಾ ಇರಿಸಲಾಗುವುದು ಹಾಗೂ ರಾತ್ತಿ 10 ಗಂಟೆಯ ಬಳಿಕ ಅನಗತ್ಯವಾಗಿ ನಗರದಲ್ಲಿ ಓಡಾಡುವವರ ಮೇಲೆ ನಿರ್ದಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಬೇಕು ಮತ್ತು ಯಾವುದೇ ವದಂತಿಗಳಿಗೆ ಕಿವಿ ಕೊಡದೆ ಸಂಯಮದಿಂದ ವರ್ತಿಸಬೇಕೆಂದು  ಎನ್ ಶಶಿ ಕುಮಾರ್ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚನ್ನಪಟ್ಟಣ ಗೌಡಗೆರೆ ಚಾಮುಂಡೇಶ್ವರಿ ದರ್ಶನ ಬಳಿಕ ಡಿಕೆಶಿ ಹೇಳಿಕೆ!

Fri Jul 29 , 2022
ಬೆಳಿಗ್ಗೆ ದೆಹಲಿಗೆ ಹೋಗುತ್ತಿದ್ದೇನೆ, ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ ದ್ವಿಪಕ್ಷೀಯರ ಅಥವಾ ವಿರೋಧ ಪಕ್ಷದವರ ಪ್ರಶ್ನೆ – ಯಾರಾದ್ರೂ ಇಟ್ಟುಕೊಳ್ಳಲಿ ಪಾಪ ಬಹಳ ಆಸೆಗಳಿ ಇದ್ದಾವೆ ಮತ್ತೆ ನಮ್ಮನ್ನ ಇಡಿಯಲ್ಲಿ ಸಿಕ್ಕಿ ಹಾಕಿಸೋದಕ್ಕೆ ತಯಾರಿಗಳು ನಡೀತಿದ್ದಾವೆ, ಇಲ್ಲ ಅಙತ ಹೇಳೊದಿಲ್ಲ ಈ ದೇವಿ ಇದ್ದಾಳೆ ನನ್ನ ರಕ್ಷಣೆ ಮಾಡೋದಕ್ಕೆ ಏನಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಕೊಡುತ್ತಾಳೆ, ಏನೂ ತಪ್ಪು ಮಾಡಿಲ್ಲ ಅಂದ್ರೆ ಈ ದೇವಿಯೇ ಎಲ್ಲಾ ನೋಡಿಕೊಳ್ಳುತ್ತಾಳೆ ಆಗಸ್ಟ್ ನಲ್ಲೇ […]

Advertisement

Wordpress Social Share Plugin powered by Ultimatelysocial