ಮೆಟ್ರೋ ಪಿಲ್ಲರ್ ಬಿದ್ದು ಮೃತಪಟ್ಟ ತೇಜಸ್ವಿನಿ ಅವರು ಮಕ್ಕಳಿಗಾಗಿ ವರ್ಕ್ ಫ್ರಂ ಹೋಂ ಆಪ್ಷನ್ ಬೇಡ ಎಂದು ನಿರಾಕರಿಸಿದ್ದರು.ಮೊಟೊರೊಲ ಸಲ್ಯೂಷನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ವಿನಿಗೆ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶ ಇತ್ತು.ಆದರೆ ಮಕ್ಕಳನ್ನು ಆಫೀಸ್ ಹತ್ತಿರದ ನರ್ಸರಿಗೆ ಸೇರಿಸಿದ ಕಾರಣ ಆಫೀಸ್ಗೆ ಹೋಗೋದಕ್ಕೆ ತೇಜಸ್ವಿನಿ ನಿರ್ಧಾರ ಮಾಡಿದ್ದರು.ಪತಿ ಲೋಹಿತ್ ವಿಜಯನಗರದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಗ್ಗೆ ತಾವು ಕೆಲಸಕ್ಕೆ ಹೋಗುವ ಮುನ್ನ ಮಕ್ಕಳು ಮಾನ್ಯತಾ ಟೆಕ್ ಪಾರ್ಕ್ನ ಪ್ರೀ ಸ್ಕೂಲ್ಗೆ ಬಿಟ್ಟು ಹೋಗುತ್ತಿದ್ದರು.ಶಾಲೆ ಮುಗಿದ ನಂತರ ತೇಜಸ್ವಿನಿ ಕೂಡ ಮಕ್ಕಳ ಜತೆ ಮನೆಗೆ ಬಂದು ಕೆಲಸ ಮುಂದುವರಿಸುತ್ತಿದ್ದರು. ಹೊಸ ಪರಿಸರಕ್ಕೆ ಮಕ್ಕಳು ಹೊಂದಿಕೊಳ್ಳೋದು ಕಷ್ಟ ನಾನು ಹತ್ತಿರವೇ ಇರ್ತೀನಿ ಎಂದು ತೇಜಸ್ವಿನಿ ಆಫೀಸ್ಗೆ ಹೋಗೋಕೆ ಆರಂಭಿಸಿದ್ದರು ಎಂದು ಸಹೋದರಿ ಮಾಹಿತಿ ನೀಡಿದ್ದಾರೆ.
https://play.google.com/store/apps/details?id=com.speed.newskannada