ನಂಜನಗೂಡಿನಲ್ಲಿ ದುಷ್ಕರ್ಮಿಗಳಿಂದ ಮಿಠಾಯಿ ಅಂಗಡಿಗೆ ಬೆಂಕಿ !

ನಂಜನಗೂಡಿನಲ್ಲಿ ದುಷ್ಕರ್ಮಿಗಳಿಂದ ಮಿಠಾಯಿ ಅಂಗಡಿಗೆ ಬೆಂಕಿ

ನಂಜನಗೂಡು ಪಟ್ಟಣದ ಚಿನಿವಾರಕಟ್ಟೆ ಬೀದಿಯಲ್ಲಿರುವ ಸಿಹಿ ತಿನಿಸುಗಳ ಮತ್ತು ಕಡಲೆಪುರಿ ಅಂಗಡಿ

ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅಂಗಡಿ

ಸೋಮವಾರ ಬೆಳಗಿನ ಜಾವ ಯಾರೋ ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಾಕಿದ್ದಾರೆ

ಇದರಿಂದಾಗಿ ಅಂಗಡಿಯಲ್ಲಿದ್ದ ಸಿಹಿ ಮತ್ತು ಕಾರ ತಿನಿಸುಗಳು ,ಕಡಲೆ .ಪುರಿ ಸೇರಿದಂತೆ ಮತ್ತಿತರ ವಸ್ತುಗಳು ಸುಟ್ಟು ಭಸ್ಮವಾಗಿ ನಷ್ಟ ಉಂಟಾಗಿದೆ .

ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಯಾರು ಮಲಗದೆ ಇದ್ದ ಕಾರಣ ಅದೃಷ್ಟ ವಸಾತ್ ಭಾರಿ ಅನಾಹುತ ತಪ್ಪಿದಂತಾಗಿದೆ.

ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ .

ಅಂಗಡಿ ಮಾಲೀಕರು ಮಾತನಾಡಿ ಇದನ್ನೇ ನಂಬಿ ಜೀವನ ಮಾಡುತ್ತಿದ್ದ ನಮಗೆ ಘಟನೆಯಿಂದಾಗಿ ದಿಕ್ಕು ತೋಚದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು ಅಲ್ಲದೆ ಎಷ್ಟೇ ದೂರವಾಣಿ ಕರೆ ಮಾಡಿದರು ಅಗ್ನಿಶಾಮಕದಳದವರು ಬರದೇ ಇದ್ದ ಕಾರಣ ಸ್ಥಳೀಯರೇ ಬೆಂಕಿಯನ್ನು ನಂದಿಸಿದ್ದಾರೆ ಅಲ್ಲದೆ ಇಲ್ಲಿ ಪೊಲೀಸ್ ಗಸ್ತು ಸಹ ಇಲ್ಲದೆ ಇರುವುದರಿಂದ ಘಟನೆಗೆ ಇದು ಸಹ ಕಾರಣವಾಗಿದೆ ಎಂದು ಆರೋಪಿಸಿದರು

ಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ನಿಮಗೆ ಹಲವಾರು ಲಾಭವನ್ನು ನೀಡುತ್ತದೆ.

Tue Feb 21 , 2023
  ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ನಿಮಗೆ ಹಲವಾರು ಲಾಭವನ್ನು ನೀಡುತ್ತದೆ. ಕ್ರೆಡಿಟ್ ಕಾರ್ಡ್ ಡೆಬ್ಟ್ ಅನ್ನು ಸರಿದೂಗಿಸಲು ನೀವು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಬಳಸಿಕೊಳ್ಳಬಹುದು. ನಿಮ್ಮ ಹಣಕಾಸನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಇದು ಸಹಕಾರಿಯಾಗಲಿದೆ. ಕಡಿಮೆ ಬಡ್ಡಿದರವು ಇರಲಿದೆ. ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ಎಂದರೇನು?: ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ವ್ಯಕ್ತಿಗೆ ತನ್ನ ಹಳೆಯ ಕ್ರೆಡಿಟ್ ಕಾರ್ಡ್‌ನಿಂದ ಹೊಸ ಕ್ರೆಡಿಟ್ ಕಾರ್ಡ್‌ಗೆ ಉಳಿದಿರುವ ಮೊತ್ತವನ್ನು […]

Advertisement

Wordpress Social Share Plugin powered by Ultimatelysocial