ನವದೆಹಲಿ/ಮಾಸ್ಕೊ/ಕೀವ್: ಫ್ರಾನ್ಸ್ ಅಧ್ಯಕ್ಷ ಎನ್ಮೌಲ್ ಮ್ಯಾಕ್ರೊನ್ ಅವರ ಮನವಿ ಮೇರೆಗೆ ಉಕ್ರೇನ್ ನಲ್ಲಿ ಭಾರತೀಯ ಕಾಲಮಾನ ಇಂದು ಸೋಮವಾರ ಮಧ್ಯಾಹ್ನ 12.30ಕ್ಕೆ ಕದನ ವಿರಾಮ ಘೋಷಿಸಿ ಮಾನವೀಯ ಕಾರಿಡಾರ್ ನಿರ್ಮಿಸಲು ರಷ್ಯಾ ನಿರ್ಧರಿಸಿದೆ.ಇಂದು ಮಧ್ಯಾಹ್ನ ಕದನ ವಿರಾಮ ಘೋಷಣೆ ಮಾಡುವುದಾಗಿ ರಷ್ಯಾ ತಿಳಿಸಿದೆ.ಉಕ್ರೇನ್ ನ ಹಲವು ಭಾಗಗಳಲ್ಲಿ ಮಾನವೀಯ ಕಾರಿಡಾರ್ ಗಳನ್ನು ತೆರೆಯುವುದಾಗಿ ರಷ್ಯಾ ಘೋಷಿಸಿದೆ.ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರ ಕೋರಿಕೆಯ ಮೇರೆಗೆ ಕೈವ್, ಮಾರಿಯುಪೋಲ್, ಖಾರ್ಕಿವ್ ಮತ್ತು ಸುಮಿಯಿಂದ ಕಾರಿಡಾರ್ಗಳನ್ನು ತೆರೆಯಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.ಕಾರಿಡಾರ್ಗಳು ರಷ್ಯಾ ಸಮಯ ಬೆಳಗ್ಗೆ 10 ಗಂಟೆಯಿಂದ ಜಾರಿಯಲ್ಲಿರುತ್ತವೆ ಎಂದು ವರದಿಯಾಗಿದೆ.ಪ್ರಧಾನಿ ನರೇಂದ್ರ ಮೋದಿ ಇಂದು ಉಕ್ರೇನ್-ರಷ್ಯಾ ದೇಶಗಳ ಮುಂದುವರಿದಿರುವ ಯುದ್ಧ ಹಾಗೂ ಭಾರತೀಯರ ಸ್ಥಳಾಂತರ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗೆ ಮೋದಿಯವರ ನಿಗದಿತ ಮಾತುಕತೆಯ ನಂತರ ದೂರವಾಣಿ ಮಾತುಕತೆ ನಡೆಯಲಿದೆ. ರಷ್ಯಾದ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್ನಿಂದ ತನ್ನ ಪ್ರಜೆಗಳನ್ನು, ಹೆಚ್ಚಾಗಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತವು ಎಲ್ಲಾ ಪ್ರಯತ್ನಗಳ ನಡುವೆಯೇ ಉಭಯ ನಾಯಕರೊಂದಿಗಿನ ಪ್ರಧಾನಿ ಮೋದಿ ಮಾತುಕತೆ ಮಹತ್ವ ಪಡೆದಿದೆ. ಈ ಹಿಂದೆಯೂ ಯುದ್ಧ ಆರಂಭವಾದಾಗ ಮೋದಿ ಪುಟಿನ್ ಜೊತೆ ಮಾತನಾಡಿದ್ದರು.ಉಕ್ರೇನ್ ಅಧ್ಯಕ್ಷರ ಜೊತೆಯೂ ಮಾತುಕತೆ:ಫೆಬ್ರವರಿ 24 ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ಸಂಪೂರ್ಣ ಯುದ್ಧ ಘೋಷಣೆಯಾದ ನಂತರ ಫೆಬ್ರವರಿ 26 ರಂದು ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಮೊದಲ ಬಾರಿಗೆ ಮಾತನಾಡಿದ್ದರು.ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಭಾರತ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ರಷ್ಯಾದಿಂದ ದಾಳಿಯನ್ನು ಎದುರಿಸುತ್ತಿರುವ ದೇಶದಿಂದ ತನ್ನ ಪ್ರಜೆಗಳನ್ನು, ಹೆಚ್ಚಾಗಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತವು ಸಂಪೂರ್ಣ ಪ್ರಯತ್ನಗಳ ಮಧ್ಯೆ ಝೆಲೆನ್ಸ್ಕಿಯೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ನೆಲೆಸಿರುವ ಕಾರಣ, ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಯುದ್ಧಪೀಡಿತ ಉಕ್ರೇನ್ನಿಂದ ತನ್ನ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಫೆಬ್ರವರಿ 22ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ 15,900 ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ. ಇಂದು ಮಾರ್ಚ್ 7ರಿಂದ ಸುಮಾರು 1,200 ಭಾರತೀಯ ಪ್ರಜೆಗಳನ್ನು 7 ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಗುತ್ತದೆ ಎಂದು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಘೋಷಿಸಿದ್ದಾರೆ.ಮತ್ತೊಂದೆಡೆ, ಈಶಾನ್ಯ ಉಕ್ರೇನಿಯನ್ ನಗರವಾದ ಸುಮಿಯಿಂದ ವಿದ್ಯಾರ್ಥಿಗಳನ್ನು ಶೀಘ್ರವಾಗಿ ಸ್ಥಳಾಂತರ ಕಾರ್ಯ ಹೆಚ್ಚಿಸುವ ಭಾರತೀಯ ರಾಯಭಾರ ಕಚೇರಿ, ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಪೋಲ್ಟವಾ ಮೂಲಕ ದೇಶದ ಪಶ್ಚಿಮ ಗಡಿಗಳ ಮೂಲಕ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದೆ.’ಭಾರತದ ರಾಯಭಾರ ಕಚೇರಿಯ ತಂಡವು ಪೋಲ್ಟವಾ ನಗರದಲ್ಲಿ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಮಾರ್ಗವನ್ನು ಪೋಲ್ಟವಾ ಮೂಲಕ ಪಶ್ಚಿಮ ಗಡಿಗಳಿಗೆ ಸಂಘಟಿಸಲು ನೆಲೆಸಿದೆ. ಭಾರತೀಯ ವಿದ್ಯಾರ್ಥಿಗಳು ಅಲ್ಪ ಸೂಚನೆಯ ಮೇರೆಗೆ ಹೊರಡಲು ಸಿದ್ಧರಾಗಿರಲು ಸಲಹೆ ನೀಡಲಾಗಿದೆ ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada