ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನ ವಿಲನ್ ಆಗಿದ್ದ ಮೌರ್ಯ, ಇದೀಗ ಹೀರೋ ಆಗಿ ನಕ್ಷತ್ರಳ ಪ್ರಾಣ ಉಳಿಸಿದ್ದಾನೆ. ಅದರ ಜೊತೆಗೆ ನಕ್ಷತ್ರ ಮುಂದೆ ಕೈಮುಗಿದು, ಮಂಡಿಯೂರಿ ಕ್ಷಮೆ ಕೇಳಿದ್ದಾನೆ. ನಕ್ಷತ್ರಗೆ ಬಾಯ್ತುಂಬ ಅತ್ತಿಗೆ ಅಂತ ಕರೆದಿದ್ದಾನೆಶಕುಂತಲಾ ದೇವಿಗೆ ಬ್ಲಾಕ್ ಮೇಲ್ ಮಾಡಿ ಭೂಪತಿ-ನಕ್ಷತ್ರ ಮದುವೆಯನ್ನ ಚಂದ್ರಶೇಖರ್ ಮಾಡಿಸಿದ್ದರು ಎಂದು ಹಾಗೇ ಇದೆಲ್ಲಾ ನಕ್ಷತ್ರ ಪ್ಲಾನ್ ಎಂದು ಮೌರ್ಯ ಭಾವಿಸಿದ್ದ. ಆದರೆ, ಮಗಳ ಖುಷಿಗಾಗಿ ಚಂದ್ರಶೇಖರ್ ಸ್ವಾರ್ಥಿಯಾಗಬೇಕಾಯಿತು ಎಂದು ಹಾಗೂ ಮದುವೆ ವಿಚಾರದಲ್ಲಿ ನಕ್ಷತ್ರ ಮುಗ್ಧೆ ಎಂಬ ಸತ್ಯ ಮೌರ್ಯನಿಗೆ ತಿಳಿದುಬಂತು. ಹೀಗಾಗಿ, ತನ್ನ ದ್ವೇಷಕ್ಕೆ ಅರ್ಥವೇ ಇಲ್ಲ ಎಂದು ಮೌರ್ಯ ತೀರ್ಮಾನಿಸಿದ್ದಾನೆ.ನಕ್ಷತ್ರ ಹಾಗೂ ಚಂದ್ರಶೇಖರ್ ವಿರುದ್ಧ ಮೌರ್ಯನ ದ್ವೇಷ ಈಗ ಕರಗಿ ಹೋಗಿದೆ. ಹೀಗಾಗಿ, ನಕ್ಷತ್ರಗೆ ಮೌರ್ಯ ಕೈಮುಗಿದು ಕ್ಷಮೆ ಕೇಳಿದ್ದಾನೆ. ‘’ನನ್ನನ್ನ ಕ್ಷಮಿಸಿ ಅತ್ತಿಗೆ’’ ಅಂತ ಹೇಳುತ್ತಾ ಮೌರ್ಯ ಮಂಡಿಯೂರಿದ್ದಾನೆ. ಮೌರ್ಯನ ಮಾತುಗಳನ್ನ ಕೇಳಿ ನಕ್ಷತ್ರಗೂ ಸಂತಸವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada