ಕಾಂತಾರ ಒಂದು ದಂತಕಥೆ ನೋಡಿದ ಪ್ರೇಕ್ಷಕರಿಗೆ ಕಾಂತಾರ 2 ನೋಡೋ ಆಸೆಯಾಗಿದೆ. ಕಾಂತಾರ ಚಿತ್ರತಂಡದ ಮೇಲೆ ದಿನ ಕಳೆದಂತೆ ನಿರೀಕ್ಷೆಯು ಹೆಚ್ಚಾಗುತ್ತಿದೆ. ಈ ಕಾಂತಾರ 2 ಕುತೂಹಲಕ್ಕೆ ಹೊಂಬಾಳೆ ಫಿಲ್ಮ್ನ ವಿಜಯ್ ಕಿರಂಗದೂರು ಅವರೇ ಸುಳಿವು ಬಿಟ್ಟು ಕೊಟ್ಟಿದ್ದು, ದೈವದ ಹರಕೆ ತೀರಿಸಿದ ನಟ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರಕ್ಕಾಗಿ ಪೆನ್ನು, ಪೇಪರ್ ಹಿಡಿದು ಕೂತಿದ್ದಾರಂತೆ.
ಕಾಂತಾರ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರೆ ಕಾಂತಾರ 2 ಚಿತ್ರದಲ್ಲೂ ಅಭಿನಯಿಸೋದು ಪಕ್ಕಾ ಆಗಿದೆ. ಕಾಂತಾರ 2ರಲ್ಲೂ ಪಂಜುರ್ಲಿ ದೈವ, ಹಳ್ಳಿಯ ಜನರು ಹಾಗೂ ತೊಂದರೆಗೊಳಗಾದ ರಾಜನ ಸಂಬಂಧದ ಕಥೆಯೇ ಆಗಿರಲಿದೆ. ರಾಜಮನೆತನದವರು ದೈವದ ಜೊತೆ ಒಪ್ಪಂದ ಮಾಡಿಕೊಂಡ್ರು ಹಳ್ಳಿಯವರ ಜಾಗ ಕಬಳಿಸೋ ಸಂಚು ಹಾಕಲಾಗುತ್ತೆ. ಆದ್ರೆ ದೈವವೇ ಹಳ್ಳಿ ಜನರ ಜಾಗ ರಕ್ಷಣೆ ನಿಂತಿದೆ. ಇದೇ ರಾಜನಿಗೂ ಪ್ರಕೃತಿಗೂ ನಡೆಯೋ ಮಹಾಕದನವೇ ಕಾಂತಾರ 2ರ ಕಥೆಯ ತಿರುಳಾಗಿರುತ್ತೆ. ಆದ್ರೆ, ರಿಷಬ್ ಶೆಟ್ಟಿ ಅವರು ಕಾಂತಾರ 2ನಲ್ಲಿ ಯಾವ್ಯಾವ ಪಾತ್ರಗಳಿಗೆ ಯಾವ್ಯಾವ ತಿರುವುಗಳನ್ನ ಕೊಡ್ತಾರೆ ಅನ್ನೋದೇ ಸಸ್ಪೆನ್ಸ್.
ರಿಷಬ್ ಶೆಟ್ಟಿ ಸಂಭಾವನೆ ದುಪ್ಪಟ್ಟು
ರಿಷಬ್ ಶೆಟ್ಟಿ ಅವರು ಈಗಾಗಲೇ ಕರಾವಳಿ ಭಾಗದ ಅರಣ್ಯಗಳಿಗೆ ಎಂಟ್ರಿ ಕೊಟ್ಟಿದ್ದು, 2 ತಿಂಗಳು ಅಲ್ಲಿನ ಬುಡಕಟ್ಟು ಜನರ ಜೀವನಶೈಲಿಯನ್ನ ಬಹಳ ಹತ್ತಿರದಿಂದ ವೀಕ್ಷಿಸಲಿದ್ದಾರೆ. ಇದೇ ಕಾಂತಾರ 2 ಚಿತ್ರದ ಕಥೆಗೆ ಆಧಾರ ಎನ್ನಲಾಗಿದೆ. ಕಾಂತಾರ ಒಂದು ಚಿತ್ರಕಥೆಯನ್ನ ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ವಿಶ್ವದೆಲ್ಲೆಡೆ ಕಾಂತಾರ ಸದ್ದು ಮಾಡಿದ್ದರಿಂದ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಗಳಿಸಿತ್ತು. ಕಾಂತಾರ 2 ಚಿತ್ರದ ಬಜೆಟ್ ಅನ್ನು ನಿರ್ಮಾಪಕ ವಿಜಯ್ ಕಿರಂಗದೂರು ಹೆಚ್ಚಿಸಲು ನಿರ್ಧರಿಸಿದ್ದಾರೆ. ನಿರೂಪಣೆ, ಸಿನಿಮಾಟೋಗ್ರಫಿ ಮಾತ್ರ ಕಾಂತಾರದ ರೀತಿಯಲ್ಲೇ ಇರಲಿದೆ. ಮೊದಲ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ 4 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಕಾಂತಾರ 2ರಲ್ಲಿ ರಿಷಬ್ ಶೆಟ್ಟಿ ಅವರ ಸಂಭಾವನೆ ದುಪ್ಪಟ್ಟಾಗುವ ಸಾಧ್ಯತೆಯಿದೆ.
https://play.google.com/store/apps/details?id=com.speed.newskannad