ಸಿಎಂ ಬೊಮ್ಮಾಯಿ ಅವರನ್ನು ಎಂ.ಎಸ್​. ಧೋನಿಗೆ ಹೋಲಿಸಿ ಸಂಸದೆ ಸುಮಲತಾ ಕೊಟ್ಟ ಕಾರಣ ಹೀಗಿದೆ.

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್​ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿಗೆ ಹೋಲಿಸಿದ ಪ್ರಸಂಗ ನಡೆದಿದೆ.

 

ನಿನ್ನೆ (ಮಾ.14) ನಡೆದ ವೈರಮುಡಿ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಮಾತನಾಡುವಾಗ ಸಿಎಂ ಬಸವರಾಜ ಬೊಮ್ಮಾಯಿರನ್ನ ಧೋನಿಗೆ ಹೋಲಿಸಿದರು.ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದೀನಿ. ಹಲವಾರು ವಿಷಯದ ಬಗ್ಗೆ ಒಂದೆ ಪತ್ರದಲ್ಲಿ ತರ್ತೀರಲ್ಲ ಅಂತಾರೆ, ತಾಳ್ಮೆಯಿಂದ ಆಲಿಸುತ್ತಾರೆ. ಸಿಎಂ ಸರ್ ಕೂಲ್ ಕ್ಯಾಪ್ಟನ್​ ಧೋನಿ‌ ರೀತಿ ಎಂದು ಸಂಸದೆ ಸುಮಲತಾ ಶ್ಲಾಘಿಸಿದರು.

ಮಂಡ್ಯ ಜಿಲ್ಲೆಯ ಕೆಲಸಕ್ಕೆ ಅವರ ಮುಂದೆ ಹೋದ್ರು ಯಾವುದಕ್ಕು ಇಲ್ಲ ಎನ್ನಲಿಲ್ಲ. ಜಿಲ್ಲೆಯಲ್ಲಿ ನಿಂತಿದ್ದ ಎರಡು ಕಾರ್ಖಾನೆಗಳ ಪೈಕಿ ಪಿಎಸ್​ಎಸ್ ಕೆ ಕಾರ್ಖಾನೆ ಆರಂಭಿಸಿದ್ರು. ಇದೀಗ ಮೈಷುಗರ್ ಆರಂಭವಾಗುವ ಶುಭಗಳಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವಂತೆ ಇದೇ ಸಂದರ್ಭದಲ್ಲಿ ಸುಮಲತಾ ಅವರು ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಮೋಜಿಗಳಿಂದ ಹಿಡಿದು ಕೋಡ್ ಪದಗುಚ್ಛಗಳವರೆಗೆ, ರಷ್ಯಾದ ಪ್ರತಿಭಟನಾಕಾರರು ಹೇಗೆ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ?

Tue Mar 15 , 2022
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ನಂತರ, ದೇಶದ ಸಾಮಾಜಿಕ ಮಾಧ್ಯಮವು ಸೂರ್ಯಕಾಂತಿ ಅಥವಾ ವಾಕಿಂಗ್ ಮ್ಯಾನ್‌ನ ಎಮೋಜಿಗಳಿಂದ ತುಂಬಿತ್ತು. ‘ನಾವು ಕೇಂದ್ರಕ್ಕೆ ನಡೆದಾಡಲು ಹೋಗೋಣ’ ಅಥವಾ ‘ವಾಕ್ ಮಾಡಲು ಹವಾಮಾನವು ಉತ್ತಮವಾಗಿದೆ’ ಎಂಬ ನುಡಿಗಟ್ಟುಗಳು ಸಾಮಾನ್ಯವಾದವು. ತಿಳಿದಿರುವವರಿಗೆ, ಇವುಗಳು ಯಾದೃಚ್ಛಿಕ ಪಠ್ಯಗಳಲ್ಲ ಆದರೆ ಇತರರಿಗೆ ತಾವು ಹಾಜರಾಗುತ್ತಿದ್ದೇವೆ ಎಂದು ಹೇಳುವ ಒಂದು ಮಾರ್ಗವಾಗಿದೆಪ್ರತಿಭಟನೆ. ಅಷ್ಟೇ ಅಲ್ಲ, BBC ವರದಿಯ ಪ್ರಕಾರ, ಪ್ರತಿಭಟನಾಕಾರರು ಈ ಕೋಡ್‌ಗಳ ಮೂಲಕ […]

Advertisement

Wordpress Social Share Plugin powered by Ultimatelysocial