ಕೊಲೆ, ಅತ್ಯಾಚಾರ, ವಂಚನೆ, ಮೋಸ ಹೀಗೆ ಪ್ರೀತಿಯಲ್ಲಿ ಇದೆಲ್ಲವೂ ನಡೆಯುತ್ತದೆ. ಇನ್ನೂ ಇಬ್ಬರ ಲವ್ಸ್ಟೋರಿಯಲ್ಲಿ (Love Story) ಮೂರನೇ ವ್ಯಕ್ತಿಯ ಎಂಟ್ರಿ ಆದರಂತೂ ಅಲ್ಲಿ ಅಪಾಯ ತಪ್ಪಿದ್ದಲ್ಲ.
ಇಂಥದ್ದೇ ಒಂದು ಘಟನೆ ತಮಿಳುನಾಡಿನಲ್ಲಿಯೂ (Tamilnadu) ನಡೆದಿದೆ. ಒಬ್ಬ ಯುವತಿ ತನ್ನ ಪ್ರಿಯತಮನ ಜೊತೆ ಸೇರಿಕೊಂಡು ಆತನ ಮಾಜಿ ಪತ್ನಿಯನ್ನು ಕೊಲೆ (Murder) ಮಾಡಿರುವ ಬೆಚ್ಚಿಬೀಳಿಸೋ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ. ಯುವತಿ ಹಾಗೂ ಆಕೆಯ ಬಾಯ್ಫ್ರೆಂಡ್ (Boy Friend) ಸೇರಿ ಆತನ ಮಾಜಿ ಪತ್ನಿಯನ್ನು ಉಸಿರುಕಟ್ಟಿಸಿ ಸಾಯಿಸಿದ್ದಾರೆ. ಸಂಶಯ ಬಾರದಂತೆ ಮಹಿಳೆಯ ಮೃತದೇಹವನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗಿ ಪೊದೆಯಲ್ಲಿ ಎಸೆದಿದ್ದಾರೆ.
ಚೆನ್ನೈನ ಜೋಡಿಯೊಂದು ಯುವಕನ ಮಾಜಿ ಪತ್ನಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ಬೈಕ್ನಲ್ಲಿ ಚಿನ್ನ ಕಾಂಚೀಪುರಂನಿಂದ 40 ಕಿಲೋ ಮೀಟರ್ ದೂರಸಾಗಿಸಿ ಶ್ರೀಪೆರುಂಬುದೂರ್ನಲ್ಲಿ ಎಸೆದಿದ್ದಾರೆ.
22 ವರ್ಷದ ಮಾಜಿ ಪತ್ನಿಯ ಕೊಲೆ
25 ವರ್ಷದ ದಿನಗೂಲಿ ಕಾರ್ಮಿಕ ಕೆ. ನವೀನ್ ಕುಮಾರ್ ಹಾಗೂ 27 ವರ್ಷದ ಗೆಳತಿ ಪಿ. ಕಲ್ಪನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಕುಮಾರ್ನ ಮಾಜಿ ಪತ್ನಿ 22 ವರ್ಷದ ಪ್ರಿಯಾ ಕೊಲೆಯಾದಾಕೆ. ಏ.23ರಂದು ಪ್ರಿಯಾ ಮೃತದೇಹವನ್ನು ಶ್ರೀಪೆರುಂಬುದೂರಿನ ತೆರೆಸಾಪುರಂನಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.
ಪ್ರಕರಣ ದಾಖಲು
ನವೀನ್ ಕುಮಾರ್ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸತ್ತ ಮಗುವಿಗೆ ಜನ್ಮ ನೀಡಿದ್ದ ಪ್ರಿಯಾ ಅವರಿಂದ ನವೀನ್ ಬೇರ್ಪಟ್ಟಿದ್ದರು. ಆಕೆ ಸೆಕ್ಸ್ ದಂಧೆ ಮಾಡುತ್ತಿದ್ದಾಳೆಂದು ನವೀನ್ ಆರೋಪಿಸಿದ್ದ. ನಂತರ ವಿಚ್ಛೇದಿತ ಕಲ್ಪನಾ ಜೊತೆ ನವೀನ್ ಸಂಬಂಧ ಬೆಳೆಸಿಕೊಂಡಿದ್ದ.
ಇಬ್ಬರನ್ನು ಕೊಲೆ ಆರೋಪದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಕಲ್ಪನಾ ಹಾಗೂ ನವೀನ್ ಜೊತೆಯಾಗಿ ಬದುಕುವುದನ್ನು ಇಷ್ಟಪಡದ ಪ್ರಿಯಾ ತನ್ನ ಮಾಜಿ ಪತಿ ಹಾಗೂ ಆತನ ಪ್ರಿಯತಮೆ ಬಗ್ಗೆ ಕೆಟ್ಟದಾಗಿ ಸುದ್ದಿ ಹಬ್ಬಿಸುತ್ತಿದ್ದಳು. ಅವರ ಮಾನ ಹರಾಜು ಹಾಕುವ ಪ್ರಯತ್ನದಲ್ಲಿದ್ದ ಪ್ರಿಯಾ ಸ್ಥಳೀಯರಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದಳು ಎಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಲೆಗೆ ಮಾಸ್ಟರ್ ಪ್ಲಾನ್
ಇತ್ತೀಚೆಗೆ ಪ್ರಿಯಾ ಕಲ್ಪನಾ ಗಾಂಜಾ ಪೆಡ್ಲಿಂಗ್ ಮಾಡುವ ಬಗ್ಗೆ ಮಾಹಿತಿ ಪೊಲೀಸರಿಗೆ ಕೊಟ್ಟು ನಂತರದಲ್ಲಿ ಪೊಲೀಸರು ಕಲ್ಪನಾ ಹಾಗೂ ಆಕೆಯ ಸಹೋದರನನ್ನು ಬಂಧಿಸಿದ್ದರು. ನಂತರ ಅವರು ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಘಟನೆಯ ನಂತರ ನವೀನ್ ಹಾಗೂ ಕಲ್ಪನಾ ಪ್ರಿಯಾಳನ್ನು ಕೊಲೆ ಮಾಡಲು ಯೋಜಿಸಿದ್ದರು.
ಮದ್ಯ ಕುಡಿಸಿ ಕೊಲೆ
ಇದರಂತೆ ಏ.22ರಂದು ನವೀನ್ ಪ್ರಿಯಾಳನ್ನು ಮಾತನಾಡಲೆಂದು ಚಿನ್ನ ಕಾಂಚೀಪುರಂನ ಟೀಚರ್ಸ್ ಕಾಲೊನಿಗೆ ಕರೆದಿದ್ದ. ನಂತರ ಅಲ್ಲಿ ಆಕೆಗೆ ಮದ್ಯ ಕುಡಿಸಿದ್ದ. ಸ್ವಲ್ಪ ಹೊತ್ತಲೇ ಕಲ್ಪನಾ ಕೂಡಾ ಅವರೊಂದಿಗೆ ಬಂದು ಸೇರಿಕೊಂಡಿದ್ದಳು. ಪ್ರಿಯಾ ಅಮಲೇರಿಸಿಕೊಳ್ಳುತ್ತಿದ್ದಂತೆ ನವೀನ್ ಹಾಗೂ ಕಲ್ಪನಾ ದುಪಟ್ಟಾದಿಂದ ಪ್ರಿಯಾಳ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಪ್ರಿಯಾ ಸತ್ತಿದ್ದಾಳೆಂದು ಖಚಿತಪಡಿಸಿ ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಪೊಲೀಸರಿಗೆ ಸಂಶಯ ಬಾರದಂತೆ ಮೂವರು ಬೈಕ್ ರೈಡ್ ಮಾಡುತ್ತಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೂವರು ಬೈಕ್ ರೈಡ್ ಮಾಡುವಂತೆ ತೋರಿಸಿ ಮೃತದೇಹವನ್ನು ಪೊದೆಯಲ್ಲಿ ಎಸೆದಿದ್ದಾರೆ. ಇದಕ್ಕಾಗಿ ಚಿನ್ನ ಕಾಂಚೀಪುರಂನಿಂದ ಜೋಡಿ 40 ಕಿ. ಮೀ ಬೈಕ್ ರೈಡ್ ಮಾಡಿದ್ದಾರೆ.
ಚೆನ್ನೈನ ಜೋಡಿಯೊಂದು ಯುವಕನ ಮಾಜಿ ಪತ್ನಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ಬೈಕ್ನಲ್ಲಿ ಚಿನ್ನ ಕಾಂಚೀಪುರಂನಿಂದ 40 ಕಿಲೋ ಮೀಟರ್ ದೂರಸಾಗಿಸಿ ಶ್ರೀಪೆರುಂಬುದೂರ್ನಲ್ಲಿ ಎಸೆದಿದ್ದಾರೆ.
22 ವರ್ಷದ ಮಾಜಿ ಪತ್ನಿಯ ಕೊಲೆ
25 ವರ್ಷದ ದಿನಗೂಲಿ ಕಾರ್ಮಿಕ ಕೆ. ನವೀನ್ ಕುಮಾರ್ ಹಾಗೂ 27 ವರ್ಷದ ಗೆಳತಿ ಪಿ. ಕಲ್ಪನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಕುಮಾರ್ನ ಮಾಜಿ ಪತ್ನಿ 22 ವರ್ಷದ ಪ್ರಿಯಾ ಕೊಲೆಯಾದಾಕೆ. ಏ.23ರಂದು ಪ್ರಿಯಾ ಮೃತದೇಹವನ್ನು ಶ್ರೀಪೆರುಂಬುದೂರಿನ ತೆರೆಸಾಪುರಂನಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.
ಪ್ರಕರಣ ದಾಖಲು
ನವೀನ್ ಕುಮಾರ್ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸತ್ತ ಮಗುವಿಗೆ ಜನ್ಮ ನೀಡಿದ್ದ ಪ್ರಿಯಾ ಅವರಿಂದ ನವೀನ್ ಬೇರ್ಪಟ್ಟಿದ್ದರು. ಆಕೆ ಸೆಕ್ಸ್ ದಂಧೆ ಮಾಡುತ್ತಿದ್ದಾಳೆಂದು ನವೀನ್ ಆರೋಪಿಸಿದ್ದ. ನಂತರ ವಿಚ್ಛೇದಿತ ಕಲ್ಪನಾ ಜೊತೆ ನವೀನ್ ಸಂಬಂಧ ಬೆಳೆಸಿಕೊಂಡಿದ್ದ.
ಇಬ್ಬರನ್ನು ಕೊಲೆ ಆರೋಪದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಕಲ್ಪನಾ ಹಾಗೂ ನವೀನ್ ಜೊತೆಯಾಗಿ ಬದುಕುವುದನ್ನು ಇಷ್ಟಪಡದ ಪ್ರಿಯಾ ತನ್ನ ಮಾಜಿ ಪತಿ ಹಾಗೂ ಆತನ ಪ್ರಿಯತಮೆ ಬಗ್ಗೆ ಕೆಟ್ಟದಾಗಿ ಸುದ್ದಿ ಹಬ್ಬಿಸುತ್ತಿದ್ದಳು. ಅವರ ಮಾನ ಹರಾಜು ಹಾಕುವ ಪ್ರಯತ್ನದಲ್ಲಿದ್ದ ಪ್ರಿಯಾ ಸ್ಥಳೀಯರಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದಳು ಎಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಲೆಗೆ ಮಾಸ್ಟರ್ ಪ್ಲಾನ್
ಇತ್ತೀಚೆಗೆ ಪ್ರಿಯಾ ಕಲ್ಪನಾ ಗಾಂಜಾ ಪೆಡ್ಲಿಂಗ್ ಮಾಡುವ ಬಗ್ಗೆ ಮಾಹಿತಿ ಪೊಲೀಸರಿಗೆ ಕೊಟ್ಟು ನಂತರದಲ್ಲಿ ಪೊಲೀಸರು ಕಲ್ಪನಾ ಹಾಗೂ ಆಕೆಯ ಸಹೋದರನನ್ನು ಬಂಧಿಸಿದ್ದರು. ನಂತರ ಅವರು ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಘಟನೆಯ ನಂತರ ನವೀನ್ ಹಾಗೂ ಕಲ್ಪನಾ ಪ್ರಿಯಾಳನ್ನು ಕೊಲೆ ಮಾಡಲು ಯೋಜಿಸಿದ್ದರು.
ಮದ್ಯ ಕುಡಿಸಿ ಕೊಲೆ
ಇದರಂತೆ ಏ.22ರಂದು ನವೀನ್ ಪ್ರಿಯಾಳನ್ನು ಮಾತನಾಡಲೆಂದು ಚಿನ್ನ ಕಾಂಚೀಪುರಂನ ಟೀಚರ್ಸ್ ಕಾಲೊನಿಗೆ ಕರೆದಿದ್ದ. ನಂತರ ಅಲ್ಲಿ ಆಕೆಗೆ ಮದ್ಯ ಕುಡಿಸಿದ್ದ. ಸ್ವಲ್ಪ ಹೊತ್ತಲೇ ಕಲ್ಪನಾ ಕೂಡಾ ಅವರೊಂದಿಗೆ ಬಂದು ಸೇರಿಕೊಂಡಿದ್ದಳು. ಪ್ರಿಯಾ ಅಮಲೇರಿಸಿಕೊಳ್ಳುತ್ತಿದ್ದಂತೆ ನವೀನ್ ಹಾಗೂ ಕಲ್ಪನಾ ದುಪಟ್ಟಾದಿಂದ ಪ್ರಿಯಾಳ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಪ್ರಿಯಾ ಸತ್ತಿದ್ದಾಳೆಂದು ಖಚಿತಪಡಿಸಿ ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಪೊಲೀಸರಿಗೆ ಸಂಶಯ ಬಾರದಂತೆ ಮೂವರು ಬೈಕ್ ರೈಡ್ ಮಾಡುತ್ತಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೂವರು ಬೈಕ್ ರೈಡ್ ಮಾಡುವಂತೆ ತೋರಿಸಿ ಮೃತದೇಹವನ್ನು ಪೊದೆಯಲ್ಲಿ ಎಸೆದಿದ್ದಾರೆ. ಇದಕ್ಕಾಗಿ ಚಿನ್ನ ಕಾಂಚೀಪುರಂನಿಂದ ಜೋಡಿ 40 ಕಿ. ಮೀ ಬೈಕ್ ರೈಡ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: