“ನಾನು ಈಗ ತಾಯಿಯಾಗಿದ್ದೇನೆ. ನನ್ನ ಮಗಳು ನನ್ನ ಆದ್ಯತೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಎಲ್ಲಿ ಬೇಕಾದರೂ ಕೆಲಸ ಮಾಡುತ್ತೇನೆ. ನನ್ನ ಪತಿ ಅನೇಕ ನಟರೊಂದಿಗೆ ಕೆಲಸ ಮಾಡುತ್ತಾರೆ, ನಾನು ಹೊರಗೆ ಏಕೆ ಕೆಲಸ ಮಾಡಬಾರದು?” ಎಂದು ಪ್ರಶ್ನೆ ಎತ್ತಿದ್ದಾರೆ.
“ಆದಿತ್ಯ ಚೋಪ್ರಾ( ರಾಣಿ ಅವರ ಪತಿ) ನನ್ನನ್ನು ಹೊಗಳಿದ್ದಾರೆ. ಅವರು ಕೂಡ ಈ ಸಿನಿಮಾ ನೋಡಿ ಭಾವುಕರಾದರು. ಅಷ್ಟೇ ಅಲ್ಲ, ಇದರಲ್ಲಿ ಚೆನ್ನಾಗಿ ಅಭಿನಯಿಸಿದ್ದೀಯಾ ಎನ್ನುತ್ತಾ ಮಗುವಿನಂತೆ ಅಪ್ಪಿಕೊಂಡರು” ಎಂದು ಹೇಳಿದ್ದಾರೆ ರಾಣಿ.
ಈ ಸಿನಿಮಾ ಸಂಪೂರ್ಣ ನೈಜತೆಯನ್ನು ಆಧರಿಸಿದೆ. ಇದರ ಬಗ್ಗೆ ಮಾತನಾಡಿದ ರಾಣಿ, “ನನ್ನ ತಾಯಿ ಕೃಷ್ಣ ಮುಖರ್ಜಿಯೇ ಇಂತಹ ಪಾತ್ರ ಮಾಡಲು ಸ್ಪೂರ್ತಿ. ಇನ್ನು ಕೂಡ ನಾನು ಸಾಗರಿಕಾ ಅವರನ್ನು ಭೇಟಿ ಮಾಡಿಲ್ಲ, ಅವರೊಂದಿಗೆ ಮಾತನಾಡಿಲ್ಲ. ಆದರೆ ನಿರ್ದೇಶಕಿ ಅಶಿಮಾ ಚಿಬ್ಬರ್ ಅವರೊಂದಿಗೆ ಮಾತನಾಡುವ ಟೇಪ್’ಗಳನ್ನು ನಾನು ನೋಡಿದೆ. ಅದರಲ್ಲಿ ಕೋಪ, ಹತಾಶೆ, ಒಂಟಿತನ ಎಲ್ಲವೂ ಕಣ್ಣಿಗೆ ಕಟ್ಟಿದಂತಿತ್ತು” ಎಂದು ಹೇಳಿದ್ದಾರೆ. ಇದು ನಾರ್ವೆಯಲ್ಲಿ ದಂಪತಿಗಳು ಎದುರಿಸಿದ ಒಂದು ಘಟನೆಯನ್ನು ಆಧರಿಸಿದ ಸಿನಿಮಾ. ಮಗುವಿಗೆ ಕೈ ತುತ್ತು ನೀಡಿದರೆಂದು ಕೇಸು ದಾಖಲಿಸಿ ಮಗುವನ್ನು ಪೋಷಕರಿಂದ ದೂರವಿರಿಸುವ ಕಾನೂನು ನಾರ್ವೆ ದೇಶದಲ್ಲಿದೆ. ಇಂತಹ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಕುಟುಂಬ ಆ ಸಮಸ್ಯೆಯಿಂದ ಹೇಗೆ ಹೊರಬಂದಿದೆ ಎಂಬುದರ ಸಾರಾಂಶವನ್ನು ಹೊಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada