ಟಿಪ್ಪು ಸುಲ್ತಾನ್ ‘ಮೈಸೂರು ಹುಲಿ’ ಬಿರುದಿಗೆ ಕತ್ತರಿ ಹಾಕಲು ಶಿಫಾರಸು

ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದು, ಟಿಪ್ಪು ಸುಲ್ತಾನ್ ಕುರಿತ ವೈಭವೀಕರಣಕ್ಕೆ ಕತ್ತರಿ ಹಾಕಲು ತೀರ್ಮಾನಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಮಹತ್ವದ ನಿರ್ಧಾರವೊಂದನ್ನು ಪಠ್ಯ ಪರಿಷ್ಕರಣೆ ಸಮಿತಿ ತೆಗೆದುಕೊಂಡಿದೆ.ಶಾಲಾ ಪಠ್ಯಪುಸ್ತಕಗಳಲ್ಲಿ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಎಂಬ ಉಲ್ಲೇಖವಿದ್ದು, ಆದರೆ ಈ ಬಿರುದು ಕೊಟ್ಟಿದ್ದು ಯಾರು ? ಯಾವ ಸಂದರ್ಭದಲ್ಲಿ ನೀಡಿದ್ದರು ಎಂಬ ಕುರಿತು ಎಲ್ಲಿಯೂ ದಾಖಲೆಗಳಿಲ್ಲ. ಹೀಗಾಗಿ ‘ಮೈಸೂರು ಹುಲಿ’ ಬಿರುದನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.

ಜೊತೆಗೆ ಇನ್ನೂ ಹತ್ತು ಹಲವು ಅಂಶಗಳನ್ನು ಒಳಗೊಂಡ ವರದಿಯನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಾಜ್ಯ ಸರ್ಕಾರಕ್ಕೆ ನೀಡಿದ್ದು, ಇವುಗಳನ್ನು ಪರಿಶೀಲನೆ ನಡೆಸಿದ ನಂತರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗುವಿನಂತೆ ತೊಟ್ಟಿಲಲ್ಲಿ ಮಲಗಿ ಪೋಸ್​ ಕೊಟ್ಟ ಶಿವಣ್ಣ!

Tue Mar 29 , 2022
ಶಿವಣ್ಣ ಸದಾ ಚಿರಯುವಕನಂತೆ ಕಾಣುತ್ತಾರೆ.ಅವರು ಕೂಡ ಸದಾ ಲವಲವಿಕೆಯಿಂದಲೇ ಇರುತ್ತಾರೆ. 59ನೇ ವಯಸ್ಸಿನಲ್ಲೂ ಚಿರ ಯುವಕನಂತೆ ಇದ್ದಾರೆ ಶಿವರಾಜ್​ಕುಮಾರ್​, ಅವರ ಎನರ್ಜಿಗೆ ಅವರೇ ಸಾಟಿ. 59ನೇ ವಯಸ್ಸಿನಲ್ಲೂ ಹೀರೋ ಪಾತ್ರಗಳನ್ನೇ ಮಾಡುತ್ತಿದ್ದಾರೆ ಅಂದರೆ ಅವರ ತಾಕತ್ತಿನ ಬಗ್ಗೆ ಯೋಚನೆ ಮಾಡಿ.ಇತ್ತೀಚೆಗೆ ಸಿಗ್ನಲ್​ನಲ್ಲಿ ಜನ ಸಾಮನ್ಯರನ್ನು ಆಪ್ತರಂತೆ ಶಿವಣ್ಣ ಮಾತನಾಡಿಸಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಮಕ್ಕಳ ಜೊತೆ ಪುಟ್ಟ ಮಗುವಿನಂತ ತೊಟ್ಟಿಲಲ್ಲಿ ಮಲಗಿ ಪೋಸ್​ ಕೊಟ್ಟಿದ್ದಾರೆ ಸೆಂಚುರಿ ಸ್ಟಾರ್​ […]

Advertisement

Wordpress Social Share Plugin powered by Ultimatelysocial