ಸುಪ್ರೀಂ ತೀರ್ಪು ಬರುವವರಿಗೂ ರಾಜ್ಯದಲ್ಲಿ ಹಿಜಾಬ್ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಕೋರ್ಟ್ ಮಧ್ಯಂತರ ಆದೇಶವನ್ನ ಕೊಟ್ಟಿದ್ರೂ, ವಿದ್ಯಾರ್ಥಿನಿಯರು ಹಿಜಾಬ್ ಬಿಟ್ಟು ತರಗತಿಗಳಿಗೆ ಹಾಜರಾಗೋದಕ್ಕೆ ತಯಾರಿಲ್ಲ. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಆದೇಶಕ್ಕೆ ತಲೆಬಾಗಿ ಹೈಕೋರ್ಟ್ ಸೂಚನೆಯಂತೆ ಬುರ್ಖಾ ಹಿಜಾಬ್ನ್ನ ಬೇರೆ ಕೊಠಡಿಯಲ್ಲಿ ತೆಗೆದಿಟ್ಟು ಕ್ಲಾಸ್ಗಳಿಗೆ ಬರ್ತಾ ಇದ್ದರೆ ಇನ್ನು ಕೆಲವೊಂದಿಷ್ಟು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಬೇಕಾದ್ರೂ ಬಿಟ್ಟೇವು ಹಿಜಾಬ್ ಬಿಡಲ್ಲ ಎನ್ನುತ್ತಿದ್ದಾರೆ. ಇನ್ನು ಅನೇಕ ಪ್ರೌಢ ಶಾಲೆಯಲ್ಲಿ ಮಕ್ಕಳು ಪೂರ್ವಸಿದ್ಧತಾ ಪರೀಕ್ಷೇಗಳಿಗೂ ಹಾಜಾರಾಗಿಲ್ಲ. ಹಿಜಾಬ್ಗೆ ಅವಕಾಶ ಕೊಟ್ಟರೆ ಮಾತ್ರ ಎಕ್ಸಾಂ ಬರೆಯುತ್ತೇವೆ ಎಂದು ಹೇಳುತ್ತಿದ್ದಾರೆ.
ಹೀಗಿರುವಾಗ ಹೈಕೋರ್ಟ್ ತೀರ್ಪು ಏನಾದ್ರೂ ಹಿಜಾಬ್ ಧರಿಸೋದಕ್ಕೆ ಅವಕಾಶ ಇಲ್ಲ ಎಂದು ಬಂದರೆ ಆಗ ಏನು ಮಾಡುತ್ತೀರಿ? ಎಂದಾಗ, ಕೋರ್ಟ್ ತೀರ್ಪು ಬಂದ್ರೆ ನಾವು ಹಿಜಾಬ್ ತೆಗಿತೀವಿ ಆದರೆ ಹಿಂದೂ ವಿದ್ಯಾರ್ಥಿಗಳು ತಿಲಕ ಇಡೋ ಹಾಗಿಲ್ಲ ಕೈಗೆ ಬಳೆ ಹಾಕೋ ಹಾಗಿಲ್ಲ. ಶಾಲೆಗಳಲ್ಲಿ ಹಿಂದೂ ದೇವರನ್ನ ಪೂಜೆ ಮಾಡೋ ಹಾಗಿಲ್ಲ ಎಂದು ಹೇಳುತ್ತಿದ್ದಾರೆ.
ಒಂದುವೇಳೆ ಹಿಜಾಬ್ ಧರಿಸೋಕೆ ಅವಕಾಶ ಸಿಕ್ಕಿದರೆ ಮುಸ್ಲೀಂ ವಿದ್ಯಾರ್ಥಿನಿಯರು ಸುಮ್ಮನಾಗುತ್ತಾರೆ. ಇಲ್ಲಾ ಅಂದ್ರೆ ಮತ್ತೆ ಶಾಲಾ-ಕಾಲೇಜುಗಳಲ್ಲಿ ಬಿಂದಿ ಬಳೆ ಇತರೆ ಗಲಾಟೆಗಳು ಶುರುವಾಗುವ ಲಕ್ಷಣಗಳು ಕಾಣಿಸುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada