ಹಿಜಾಬ್ ಆಯ್ತು ಈಗ ತಿಲಕ ಗಲಾಟೆ ಶಾಲಾ-ಕಾಲೇಜುಗಳಲ್ಲಿ ಬಿಂದಿ ಬಳೆಗಳಿಗೂ ಬೀಳುತ್ತಾ ಬ್ರೇಕ್?

ಸುಪ್ರೀಂ ತೀರ್ಪು ಬರುವವರಿಗೂ ರಾಜ್ಯದಲ್ಲಿ ಹಿಜಾಬ್‌ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಕೋರ್ಟ್‌ ಮಧ್ಯಂತರ ಆದೇಶವನ್ನ ಕೊಟ್ಟಿದ್ರೂ, ವಿದ್ಯಾರ್ಥಿನಿಯರು  ಹಿಜಾಬ್‌ ಬಿಟ್ಟು ತರಗತಿಗಳಿಗೆ ಹಾಜರಾಗೋದಕ್ಕೆ ತಯಾರಿಲ್ಲ. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಆದೇಶಕ್ಕೆ ತಲೆಬಾಗಿ ಹೈಕೋರ್ಟ್‌ ಸೂಚನೆಯಂತೆ ಬುರ್ಖಾ ಹಿಜಾಬ್‌ನ್ನ ಬೇರೆ ಕೊಠಡಿಯಲ್ಲಿ ತೆಗೆದಿಟ್ಟು ಕ್ಲಾಸ್‌ಗಳಿಗೆ ಬರ್ತಾ ಇದ್ದರೆ ಇನ್ನು ಕೆಲವೊಂದಿಷ್ಟು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಬೇಕಾದ್ರೂ ಬಿಟ್ಟೇವು ಹಿಜಾಬ್‌ ಬಿಡಲ್ಲ ಎನ್ನುತ್ತಿದ್ದಾರೆ. ಇನ್ನು ಅನೇಕ ಪ್ರೌಢ ಶಾಲೆಯಲ್ಲಿ ಮಕ್ಕಳು ಪೂರ್ವಸಿದ್ಧತಾ ಪರೀಕ್ಷೇಗಳಿಗೂ ಹಾಜಾರಾಗಿಲ್ಲ. ಹಿಜಾಬ್‌ಗೆ ಅವಕಾಶ ಕೊಟ್ಟರೆ ಮಾತ್ರ ಎಕ್ಸಾಂ ಬರೆಯುತ್ತೇವೆ ಎಂದು ಹೇಳುತ್ತಿದ್ದಾರೆ.

ಹೀಗಿರುವಾಗ ಹೈಕೋರ್ಟ್‌ ತೀರ್ಪು ಏನಾದ್ರೂ ಹಿಜಾಬ್‌ ಧರಿಸೋದಕ್ಕೆ ಅವಕಾಶ ಇಲ್ಲ ಎಂದು ಬಂದರೆ ಆಗ ಏನು ಮಾಡುತ್ತೀರಿ? ಎಂದಾಗ, ಕೋರ್ಟ್‌ ತೀರ್ಪು ಬಂದ್ರೆ ನಾವು ಹಿಜಾಬ್‌ ತೆಗಿತೀವಿ ಆದರೆ ಹಿಂದೂ ವಿದ್ಯಾರ್ಥಿಗಳು ತಿಲಕ ಇಡೋ ಹಾಗಿಲ್ಲ ಕೈಗೆ ಬಳೆ ಹಾಕೋ ಹಾಗಿಲ್ಲ. ಶಾಲೆಗಳಲ್ಲಿ ಹಿಂದೂ ದೇವರನ್ನ ಪೂಜೆ ಮಾಡೋ ಹಾಗಿಲ್ಲ ಎಂದು ಹೇಳುತ್ತಿದ್ದಾರೆ.

ಒಂದುವೇಳೆ ಹಿಜಾಬ್‌ ಧರಿಸೋಕೆ ಅವಕಾಶ ಸಿಕ್ಕಿದರೆ ಮುಸ್ಲೀಂ ವಿದ್ಯಾರ್ಥಿನಿಯರು ಸುಮ್ಮನಾಗುತ್ತಾರೆ. ಇಲ್ಲಾ ಅಂದ್ರೆ ಮತ್ತೆ ಶಾಲಾ-ಕಾಲೇಜುಗಳಲ್ಲಿ ಬಿಂದಿ ಬಳೆ ಇತರೆ ಗಲಾಟೆಗಳು ಶುರುವಾಗುವ ಲಕ್ಷಣಗಳು ಕಾಣಿಸುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳದ 60 ವರ್ಷ ವಯಸ್ಸಿನ ದಿನಗೂಲಿ ಕೆಲಸಗಾರ ಮಾದರಿ!

Thu Feb 17 , 2022
ಕೇರಳದ 60 ವರ್ಷದ ದಿನಗೂಲಿ ಕೆಲಸಗಾರ ಮಾದರಿ! ಕೈಯಲ್ಲಿ ಒಂದು ಸೂಟ್ ಮತ್ತು ಐಪ್ಯಾಡ್ ಅನ್ನು ಆಡುತ್ತಿರುವ ಚಿತ್ರಗಳು ವೈರಲ್ ಆಗುತ್ತವೆ- ವೀಕ್ಷಿಸಿ (ಫೋಟೋ ಕ್ರೆಡಿಟ್ – ಮಮ್ಮಿಕ್ಕಾ, Shk ಡಿಜಿಟಲ್ / Instagram) ಸಾಮಾಜಿಕ ಮಾಧ್ಯಮವು ಹಲವಾರು ಬಳಕೆದಾರರಿಗೆ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಅವರು ವಿಶಿಷ್ಟ ಗುಣಗಳನ್ನು ಹೊಂದಿದ್ದಾರೆ, ಅವರು ಸಂವೇದನೆ ಅಥವಾ ಸ್ಟಾರ್ ಆಗಲು. ಬ್ಯಾಂಡ್‌ವ್ಯಾಗನ್‌ಗೆ ಸೇರಲು ಇತ್ತೀಚಿನವರು ಕೇರಳದ 60 ವರ್ಷದ ದೈನಂದಿನ ಕೂಲಿ ಕಾರ್ಮಿಕರು […]

Advertisement

Wordpress Social Share Plugin powered by Ultimatelysocial