ಎಲ್ಲಾ ಪರಿಸರ ಪ್ರೇಮಿಗಳು ನೋಡಲೇ ಬೇಕಾದ ಸುದ್ದಿ ಇದು ಹೌದು ರಾಯಚೂರು ಜಿಲ್ಲೆ ಸಿರವಾರದಾ ಯುವಕ ಲಕ್ಷ್ಮಣ್ ಒಟ್ಟು 22 ಮರಗಳನ್ನು ದತ್ತು ಪಡೆದು 1ವರ್ಷದಿಂದ ನೀರುಣಿಸುವುದು ಅದನ್ನು ಜೋಪಾನ ಮಾಡುವುದು ತನ್ನ ಕೆಲಸ ಮುಗಿದ ನಂತರ ಗಿಡಗಳಿಗೆ ನೀರುಣಿಸುವುದು ಕಾಯಕ ಇವನಿಗೆ ಸಿರವಾರ ಪರಿಸರ ಪ್ರೇಮಿಗೆ ಊರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಹಿರಿಯ ಮುಖಂಡರೊಬ್ಬರು ಇಂದು ಸನ್ಮಾನಿಸಿ ಗೌರವಿಸಿದರು ಅದು ಎಲ್ಲಿ ಅಂತೀರಾ ಇಲ್ಲಿದೆ ನೋಡಿ
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪಿ ಡಬ್ಲೂ ಡಿ ಕ್ಯಾಂಪ್ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೆಲಸ ಮಾಡುವ ಲಕ್ಷ್ಮಣ್ ಎಂಬ ಯುವಕ ಹಾಗೂ ಪರಿಸರ ಪ್ರೇಮಿ ಬಸವರಾಜ್ ಪೂಜಾರಿ ಅವರಿಗೆ ಸಿರವಾರದ ವಾಣಿಜ್ಯೋದ್ಯಮಿ ಜಿ ಲೋಕರೆಡ್ಡಿ ಪರಿಸರ ದಿನದಂದು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ತದನಂತರ ಮಾತನಾಡಿದ ಜಿ ಲೊಕರೆಡ್ಡಿ ಲಕ್ಷ್ಮಣ ಎಂಬ ಯುವಕನಲ್ಲಿ ಇಂಥ ಪರಿಸರ ಪ್ರೇಮ ಕಂಡು ನನಗೆ ಪರಿಸರ ದಿನದಂದು ಅವರಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಸಂದೇಶ ಎಂಬುದು ನನ್ನ ಭಾವನೆ ಎಂದು ತಿಳಿಸಿದರು .
ತದನಂತರ ಮಾತನಾಡಿದ ಲಕ್ಷ್ಮಣ ನಮ್ಮ ಅಣ್ಣ ಬಸವರಾಜ ಪೂಜಾರಿ ಅವರಿಂದ ನಾನು ಪರಿಸರದ ಬಗ್ಗೆ ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿ ಮರಗಳನ್ನು ನೀರುಣಿಸುವ ಆರೈಕೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ನಮ್ಮ ಜೀವನದಲ್ಲಿ 1 ಮರವಾದರು ಬೆಳೆಸಿ ಹಸಿರು ಭಾರತ ಮಾಡಿ ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada