ಸ್ಯಾಂಡಲ್ ವುಡ್ ನ ಹೆಸರಾಂತ ವಿಲನ್ ಗಳ ಮಕ್ಕಳು ಒಟ್ಟಾಗಿ ನಟಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಚಿತ್ರ ಅಂದ್ರೆ ಅದು ನವಗ್ರಹ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ರಿಲೀಸ್ ಆಗಿ 12 ವರ್ಷಗಳು ಕಳೆದಿವೆ. 2008ರ ನವೆಂಬರ್ 7 ರಂದು ರಿಲೀಸ್ ಆಗಿದ್ದ ಚಿತ್ರ ಆ ಟೈಮ್ ಅಲ್ಲಿ ಕ್ರೇಜ್ ಕ್ರಿಯೇಟ್ ಮಾಡಿತ್ತು.
ಸ್ಯಾಂಡಲ್ನಲ್ಲಿ ಸಖತ್ ಸದ್ದು ಮಾಡಿದ್ದ ನವಗ್ರಹ ಸಿನಿಮಾದ ಸೀಕ್ವೆಲ್ ಕುರಿತು ಬಹಳ ವರ್ಷದಿಂದಲೂ ಚರ್ಚೆಯಾಗುತ್ತಲೆ. ಈ ಕುರಿತು ದಿನಕರ್ ಸಹ ಸುಳಿವು ನೀಡಿದ್ದರು. 12 ವರ್ಷದ ನಂತರವೂ ಇಂತಹದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇದೆ.
ನವಗ್ರಹ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಜಗ್ಗು ಬೆಟ್ಟದಿಂದ ಧರೆಗೆ ಅಪ್ಪಳಿಸ್ತಾನೆ, ಜಗ್ಗು ಕಥೆ ಅಲ್ಲಿಗೆ ಮುಗಿದೇ ಹೋಯಿತು ಅನ್ಕೊಂಡಿರಬೇಕಾದ್ರೆ. ತಟ್ಟ ಅಂತ ಜಗ್ಗು ಕಣ್ಣು ಬಿಡ್ತಾನೆ. ಈ ದೃಶ್ಯ ಅದಾಗಲೇ ಸಿಕ್ವೇಲ್ ಸುಳಿವು ನೀಡಿತ್ತು.
ತೂಗುದೀಪ ಶ್ರೀನಿವಾಸ್ ಮಗ ದರ್ಶನ್, ಟೈಗರ್ ಪ್ರಭಾಕರ್ ಮಗ ವಿನೋದ್ ಪ್ರಭಾಕರ್,ಸುಧೀರ್ ಮಗ ತರುಣ್ ಸುಧೀರ್, ಕೀರ್ತಿ ರಾಜ್ ಪುತ್ರ ಧರ್ಮ ಕೀರ್ತಿ ರಾಜ್, , ಲೋಕೇಶ್ ಮಗ ಸೃಜನ್ ಲೋಕೇಶ್, ದಿನೇಶ್ ಪುತ್ರ ಗಿರಿ ದಿನೇಶ್, ಮತ್ತು ಸುಂದರ್ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್ ಹೀಗೆ ದಿಗ್ಗಜ ಖಳನಾಯಕರ ಮಕ್ಕಳು ಈ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ನವಗ್ರಹ ಸಿನಿಮಾ ಬಳಿಕ ದರ್ಶನ್ ಮತ್ತು ದಿನಕರ್ ಕಾಂಬಿನೇಷನ್ನಲ್ಲಿ ಸರ್ವಾಂತರ್ಯಾಮಿ ಎಂಬ ಸಿನಿಮಾ ಬರುತ್ತೆ ಎಂದು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಬಹುಶಃ ಈ ಚಿತ್ರ ನವಗ್ರಹದ ಸೀಕ್ವೆಲ್ ಎಂದು ಸಹ ಅನೇಕರು ಮಾತನಾಡಿಕೊಂಡಿದ್ದರು. ಆದ್ರೆ, ಈವರೆಗೂ ಈ ಚಿತ್ರ ಸೆಟ್ಟೇರಲೇ ಇಲ್ಲ. ಈ ಚಿತ್ರದ ಮೇಲಿನ ಕುತೂಹಲವೂ ಕಮ್ಮಿಯಾಗಿಲ್ಲ.
ಈಗ ನವಗ್ರಹ ಚಿತ್ರ ಬಿಡುಗಡೆಯಾಗಿ 12 ವರ್ಷಗಳು ಕಳೆದಿವೆ ಮತ್ತೆ ಈ ಚಿತ್ರದ ಸಿಕ್ವೇಲ್ ಬರುತ್ತೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿವೆ. ಈ ಪ್ರಶ್ನೆಗೆ ಉತ್ತರವನ್ನ ತೂಗುದೀಪ ಶ್ರೀನಿವಾಸ್ ಅವರ ಮಕ್ಕಳೆ ನೀಡಬೇಕು.
ಇದನ್ನ ಓದಿ: ಅಪ್ಪುಗೆ ಅಭಿನಂದನಾ ಪತ್ರ ಬರೆದ ಸರ್ಕಾರಿ ಶಾಲೆ