ನೆಗಡಿ ಆದರೆ ಚಿಂತಿಸಬೇಡಿ ಇಲ್ಲಿದೆ ನೋಡಿ ಮನೆ ಮದ್ದು

ನೆಗಡಿ ಆದರೆ ಚಿಂತಿಸಬೇಡಿ ಇಲ್ಲಿದೆ ನೋಡಿ ಮನೆ ಮದ್ದು

ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ.

ಬೆಳಿಗ್ಗೆ ಎದ್ದಾಕ್ಷಣ ಚಹಾ ಕುಡಿಯುವ ಬದಲು ಗ್ರೀನ್ ಟೀ ಕುಡಿಯಿರಿ.

ಅದಕ್ಕೆ ಒಂದು ಚಮಚ ಜೇನು ಸೇರಿಸಿ. ರೋಗನಿರೋಧಕ ಶಕ್ತಿ ಹೆಚ್ಚಿರುವ ಜೇನು ನೆಗಡಿ ಹೋಗಲಾಡಿಸಲು ಒಂದು ಅತ್ಯುತ್ತಮ ಮದ್ದು.

ಬೆಳಿಗ್ಗೆ ಎದ್ದಾಕ್ಷಣ ಎರಡು ಲೋಟ ಬಿಸಿನೀರು ಸೇವಿಸಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಶೀತದಿಂದಾಗುವ ಮುಂದಿನ ಸಮಸ್ಯೆಗಳನ್ನೂ ಬಗೆಹರಿಸಬಹುದು. ಅಂದರೆ ಗಂಟಲು ನೋವಿಗೆ ಉಪ್ಪು ನೀರು ಹೇಳಿ ಮಾಡಿಸಿದ ಮದ್ದು.

ಕುದಿಯುವ ನೀರಿಗೆ ಜಜ್ಜಿದ ಶುಂಠಿ ಹಾಕಿ ಸೋಸಿ ಕುಡಿಯಿರಿ. ಕಷ್ಟವಾದರೆ ಒಂದು ತುಂಡು ಬೆಲ್ಲವನ್ನು ಸೇರಿಸಬಹುದು. ಕಾಳುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಬೆರೆಸಿದ ಕಷಾಯ ತಂಪಾದ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಶೀತ ಮೊದಲ ಹಂತದಲ್ಲಿರುವಾಗ ಇದನ್ನೆಲ್ಲಾ ಪ್ರಯತ್ನಿಸಿ. ಜ್ವರದ ಲಕ್ಷಣಗಳೂ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದೇ ಉತ್ತಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಬದಲು ಉಮೇಶ್? ಅಶ್ವಿನ್‌ಗೂ ಸ್ಥಾನ ಡೌಟ್!

Sun Jan 2 , 2022
ಜೊಹಾನ್ಸ್‌ಬರ್ಗ್: ಸೆಂಚುರಿಯನ್ ಗೆಲುವಿನ ಹೊರತಾಗಿಯೂ 2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ವಿನ್ನಿಂಗ್ ಕಾಂಬಿನೇಷನ್‌ನಲ್ಲಿ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ವಾಂಡರರ್ಸ್‌ ಪಿಚ್ ಹೆಚ್ಚು ಹಸಿರಾಗಿದ್ದು, ಗಂಟೆಗೆ 135 ಕಿಮೀ ವೇಗದಲ್ಲಿ ುಲ್ಲರ್ ಲೆಂತ್ ಬೌಲಿಂಗ್ ಮಾಡುವ ಉಮೇಶ್ ಯಾದವ್ ಹೆಚ್ಚು ಉಪಯುಕ್ತರಾಗುವ ಲೆಕ್ಕಾಚಾರವನ್ನು ದ್ರಾವಿಡ್-ಕೊಹ್ಲಿ ಹಾಕಿಕೊಂಡಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಬದಲಿಗೆ ಉಮೇಶ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆಲ್ರೌಂಡರ್ ಕೋಟಾದಡಿಯಲ್ಲಿ ಶಾರ್ದೂಲ್ ಸೆಂಚುರಿಯನ್ ಟೆಸ್ಟ್‌ನಲ್ಲಿ ಅವಕಾಶ ಪಡೆದಿದ್ದರು. ಆದರೆ, ಬೌಲಿಂಗ್‌ನಲ್ಲಿ 2 […]

Advertisement

Wordpress Social Share Plugin powered by Ultimatelysocial