ಮಹಿಳೆಯರು ಶನಿವಾರ ಕುಂಭ ಮೆರವಣಿಗೆ ನಡೆಸಿದರು.

ದೇವಸೂಗೂರು (ಶಕ್ತಿನಗರ): ಇಲ್ಲಿನ ನಾಗರಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರು ಶನಿವಾರ ಕುಂಭ ಮೆರವಣಿಗೆ ನಡೆಸಿದರು.ಅರ್ಚಕ ಶರತ ಸ್ವಾಮಿ ಅವರು ದೇವಿ ಮೂರ್ತಿ ಹೊತ್ತುಕೊಂಡು ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ನಾಗರಯಲ್ಲಮ್ಮ ದೇವಿ ದೇವಸ್ಥಾನ ತಲುಪಿತು.ಭಕ್ತರು ಕೃಷ್ಣಾ ನದಿಯಿಂದ ನೀರು ತಂದು ದೇವಿ ಮೂರ್ತಿಗೆ ಗಂಗಾಸ್ನಾನ ಮಾಡಿಸಿದರು.ಫೆ.16 ರಂದು ರಥೋತ್ಸವ ನಡೆಯಲಿದ್ದು, ರಥವನ್ನು ಹೊರತರಲಾಯಿತು.ನಾಗರಯಲ್ಲಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಾಂತವೀರೇಶಸ್ವಾಮಿ ನಂದಿಕೋಲ, ಅರ್ಚಕ ಸಿದ್ಧರಾಮಯ್ಯಸ್ವಾಮಿ, ಸೂಗೂರೇಶ್ವರ ಸ್ವಾಮಿ, ದೇವಸ್ಥಾನದ ಪ್ರಧಾನ ಅರ್ಚಕ ಸೂಗೂರೇಶ ಶಿವಲಿಂಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

JAMES:ಪುನೀತ್ ರಾಜ್ಕುಮಾರ್ ಕೊನೆಯ ಬಾರಿಗೆ ರೋಮಾಂಚನಕಾರಿ ಪ್ರದರ್ಶನ!!

Sat Feb 12 , 2022
ಕನ್ನಡದ ದಿವಂಗತ ಸೂಪರ್‌ಸ್ಟಾರ್, ಪುನೀತ್ ರಾಜ್‌ಕುಮಾರ್ ಅವರ ಮರಣೋತ್ತರ ಬಿಡುಗಡೆಯಾದ ಜೇಮ್ಸ್‌ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ, ಅವರ ಪಾತ್ರದ ಟೀಸರ್ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕೈಬಿಡಲಾಯಿತು. ಇದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಕ್ಷಣ, ಚಿತ್ರದಲ್ಲಿನ ಅವರ ನೋಟವನ್ನು ಹೊಗಳುವಾಗ ಅಭಿಮಾನಿಗಳು ದಿವಂಗತ ನಟನನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದರು. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಪ್ರಿಯಾ ಆನಂದ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂದೆ ಜೇಮ್ಸ್ ಟೀಸರ್ ಅನ್ನು ವೀಕ್ಷಿಸಿ ಮತ್ತು ಚೇತನ್ ಕುಮಾರ್ ನಿರ್ದೇಶನದ ಚಿತ್ರದ ಕುರಿತು ಇನ್ನಷ್ಟು […]

Advertisement

Wordpress Social Share Plugin powered by Ultimatelysocial