ದೇವಸೂಗೂರು (ಶಕ್ತಿನಗರ): ಇಲ್ಲಿನ ನಾಗರಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರು ಶನಿವಾರ ಕುಂಭ ಮೆರವಣಿಗೆ ನಡೆಸಿದರು.ಅರ್ಚಕ ಶರತ ಸ್ವಾಮಿ ಅವರು ದೇವಿ ಮೂರ್ತಿ ಹೊತ್ತುಕೊಂಡು ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ನಾಗರಯಲ್ಲಮ್ಮ ದೇವಿ ದೇವಸ್ಥಾನ ತಲುಪಿತು.ಭಕ್ತರು ಕೃಷ್ಣಾ ನದಿಯಿಂದ ನೀರು ತಂದು ದೇವಿ ಮೂರ್ತಿಗೆ ಗಂಗಾಸ್ನಾನ ಮಾಡಿಸಿದರು.ಫೆ.16 ರಂದು ರಥೋತ್ಸವ ನಡೆಯಲಿದ್ದು, ರಥವನ್ನು ಹೊರತರಲಾಯಿತು.ನಾಗರಯಲ್ಲಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಾಂತವೀರೇಶಸ್ವಾಮಿ ನಂದಿಕೋಲ, ಅರ್ಚಕ ಸಿದ್ಧರಾಮಯ್ಯಸ್ವಾಮಿ, ಸೂಗೂರೇಶ್ವರ ಸ್ವಾಮಿ, ದೇವಸ್ಥಾನದ ಪ್ರಧಾನ ಅರ್ಚಕ ಸೂಗೂರೇಶ ಶಿವಲಿಂಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada