ಒಂದೇ ಕಡೆ ಕಾಣಿಸಿದ ನಾಲ್ಕು ಹೆಬ್ಬಾವು!

ಅಂಕೋಲಾ: ತಾಲ್ಲೂಕಿನ ಸಿಂಗನಮಕ್ಕಿಯಲ್ಲಿ ಅರಣ್ಯ ಇಲಾಖೆಯ ಗೇರು ತೋಟದಲ್ಲಿ ಸೋಮವಾರ ಕಾಣಿಸಿಕೊಂಡ ನಾಲ್ಕು ಹೆಬ್ಬಾವುಗಳನ್ನು ಉರಗ ತಜ್ಞ ಮಹೇಶ ನಾಯ್ಕ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಸಹಾಯದಿಂದ ಕಾಡಿಗೆ ಬಿಟ್ಟರು.

ಸಿಂಗನಮಕ್ಕಿಯ ತೋಟದ ಗುತ್ತಿಗೆ ಪಡೆದ ಸಿಬ್ಬಂದಿ ಗೇರು ಹಣ್ಣು ಕೀಳಲು ಹೋದಾಗ ಎರಡು ಹೆಬ್ಬಾವುಗಳು ಇರುವುದನ್ನು ಗಮನಿಸಿದರು.

ಅರಣ್ಯ ಇಲಾಖೆಗೆ ತಿಳಿಸಿ ಅವರ ಮೂಲಕ ಮಹೇಶ ನಾಯ್ಕ ಅವರನ್ನು ಕರೆದುಕೊಂಡು ಬರಲಾಯಿತು. ನಂತರ ಅಲ್ಲಿಯೇ ಇನ್ನೆರಡು ಹೆಬ್ಬಾವುಗಳು ಇರುವುದು ಕಂಡುಬಂತು. ಅವುಗಳನ್ನು ನೋಡಿ ಸಾರ್ವಜನಿಕರು ಆತಂಕಗೊಂಡರು.

ಮಂಗಳೂರಿನ ಪರಿಣಿತ ಉರಗ ತಜ್ಞ ಗುರುರಾಜ ಹೊಸಮನಿ ಅವರನ್ನು ಸಂಪರ್ಕಿಸಿದಾಗ, ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಹಾವುಗಳ ಮಿಲನ ಸಮಯವಾದ್ದರಿಂದ ಗಂಡು ಹಾವು ಮತ್ತು ಹೆಣ್ಣು ಹಾವು ಸೇರುತ್ತವೆ. ಏಕಕಾಲದಲ್ಲಿ 4ರಿಂದ 6 ಹಾವುಗಳ ಕಂಡುಬರುತ್ತವೆ ಎಂದು ಸ್ಪಷ್ಟನೆ ನೀಡಿದರು. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಹೆಬ್ಬಾವುಗಳು ಒಟ್ಟಿಗೆ ಕಾಣಿಸಿಕೊಂಡಿವೆ ಎಂದು ಮಹೇಶ ನಾಯ್ಕ ತಿಳಿಸಿದರು.

ಮಹೇಶ ನಾಯ್ಕ, ತಾಲ್ಲೂಕಿನ ಬಾಳೆಗುಳಿಯ ಹರ್ಶದ್ ಖಾನ್ ಅವರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು ಮತ್ತು ಕಾರವಾರದ ಅರ್ಗಾದ ರಾಮದಾಸ ಗುನಗಾ ಅವರ ಮನೆಯಲ್ಲಿ ಕಾಣಿಸಿಕೊಂಡ ಒಂದು ಹಾವು ಸೇರಿದಂತೆ ಆರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಇಬ್ಬಾಗಕ್ಕೆ ದೇವರ ಮೊರೆ ಹೋದ ಜನರು!

Tue Feb 15 , 2022
    ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಇಬ್ಬಾಗವಾಗಬೇಕು ಎಂದು ಗ್ರಾಮಸ್ಥರು ದೇವರ ಮೊರೆ ಹೋಗಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಗ್ರಾಮದ ಸಮಸ್ಯೆ ಅಥವಾ ಜಿಲ್ಲೆಗೆ ಸಂಬಂಧಿಸಿದ ಬೇಡಿಕೆಗಳಿದ್ದರೆ ಜನರು ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರ, ಮಂತ್ರಿಗಳು, ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗೋದನ್ನು ಎಲ್ಲರೂ ಬೋಡಿರುತ್ತೇವೆ. ಆದರೆ ಚಿಕ್ಕೋಡಿಯ ಜನರು ಬೆಳಗಾವಿ ಜಿಲ್ಲೆಯ ಇಬ್ಭಾಗಕ್ಕೆ ದೇವರ ಮೊರೆ ಹೋಗಿದ್ದಾರೆ. ಹೌದು, ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಮೇಲೆ ಹೋರಾಟಗಾರರು, ‘ದೇವ್ರೆ ಹೇಗಾದ್ರೂ ಮಾಡಿ […]

Advertisement

Wordpress Social Share Plugin powered by Ultimatelysocial