ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್. ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ತುಮಕೂರು ನಗರ 1, 2 ,ಮತ್ತು 3 ,ನೇ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ನನಗೆ ಈ ಭಾರಿ ತುಮಕೂರು ನಗರಕ್ಕೆ ಟಿಕೆಟ್ ನಿಡಿರುವುದು ನನಗೆ ಖುಷಿ ಎನಿಸುತ್ತದೆ
ನನಗೆ ಈ ಬಾರಿ ಟಿಕೆಟ್ ನಿಡಲು ಸಹಕರಿಸಿದ ಹೈಕಮಾಂಡ್ ನಾಯಕರಿಗೆ ಹಾಗೂ ರಾಜ್ಯ ನಾಯಕರಿಗೆ ನನ್ನ ಹೃದಯ ತುಂಬಿದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಕಾಂಗ್ರೆಸ್ ನ ಪ್ರಣಾಳಿಕೆಯಾದಂತಹ ಗ್ಯಾರಂಟಿ ಕಾರ್ಡ್ ಯಶಸ್ವಿಯಾಗಿ ಅನುಷ್ಟಾನಗೊಳ್ಳಬೆಕಾದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ತಿಳಿಸಿದರು.
ತುಮಕೂರು ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿ ಬೇಟಿ ನೀಡಿ ಪ್ರತಿಯೊಬ್ಬ ಕಾರ್ಯಕರ್ತರ ಮತ್ತು ಹಿರಿಯ ಮುಖಂಡರ ಸಲಹೆ ಪಡೆದು ಚುನಾವಣೆ ಮಾಡುತ್ತೇನೆ ಎಂದರು. ಇತ್ತೀಚೆಗೆ ಜನರು ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಜನಸಾಮಾನ್ಯರ ಬದುಕಿಗೆ ನೆರವಗುವಂತ ಅನ್ನಭಾಗ್ಯ, ಮಕ್ಕಳಿಗೆ ಶೂ ಭಾಗ್ಯ , ಮತ್ತು ಅಲವಾರು ಯೋಜನೆಗಳನ್ನು ನಿಡಿ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಿದ ಏಕೈಕ ಸರ್ಕಾರ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಇಂದಿರಾ ಗಾಂಧಿಯವರ ಅಧಿಕಾರದ ಅವದಿಯಲ್ಲಿ ಉಳುವವನೆ ಭೂಮಿ ಒಡೆಯ ಎಂಬ ಯೋಜನೆಯಿಂದಾಗಿ ದೇಶದ ಬಹುತೇಕ ಬಡವರು ಭೂಮಿ ವಡೆಯರಾದರು ಎಂದು ತಿಳಿಸಿದರು ಅದ್ದರಿಂದ ತುಮಕೂರು ನಗರದ ಅಭಿವೃದ್ಧಿಗೆ ತುಮಕೂರಿನ ಮತದಾರರು ನನಗೆ ಆಶೀರ್ವಾದ ಮಾಡಬೇಕೆಂದು ಮತದಾರ ಪ್ರಭುಗಳಿಗೆ ಮನವಿ ಮಾಡಿದರು.
https://play.google.com/store/apps/details?id=com.speed.newskannada