ಕಿರುತೆರೆ ನಟಿ ಸಾವು, ಲಿವ್ ಇನ್ ಸಂಗಾತಿ ಬಂಧನ!

 

ಕೋಲ್ಕತಾ, ಮೇ 18: ಇಲ್ಲಿನ ಗರ್ಫಾ ಪ್ರದೇಶದ ತಮ್ಮ ಮನೆಯಲ್ಲಿ ಕಿರುತೆರೆ ನಟಿ ಪಲ್ಲವಿ ಡೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಆಕೆ ಲಿನ್- ಇನ್ ಸಂಗಾತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಭಾನುವಾರ ಬೆಳಗ್ಗೆ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಮೇ 12 ರಂದು, ಟಿವಿ ಶೋ ಚಿತ್ರೀಕರಣದಲ್ಲಿ ಪಲ್ಲವಿ ಜೊತೆ ಅನಮಿತ್ರ ಪಾಲ್ಗೊಂಡಿದ್ದರು. ನಂತರ ಮನೆಗೆ ತೆರಳಿದ್ದರು. ಮೇ 15ರಂದು ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ಪಲ್ಲವಿ ಅವರ ಜೊತೆಗಾರ ಸಾಗ್ನಿಕ್ ಚಕ್ರವರ್ತಿ ಎಂಬಾತನನ್ನು ಬಂಧಿಸಿದ್ದಾರೆ.

ಮಂಗಳವಾರದಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಗರ್ಫಾ ಪೊಲೀಸ್ ಠಾಣೆಗೆ ಹಾಜರಾಗಿದ್ದ ಚಕ್ರವರ್ತಿಯನ್ನು ನಂತರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನ ದಟ್ಟವಾಗಿದೆ.

ಸಾವಿನ ಸುದ್ದಿ ಮೊದಲು ಮುಟ್ಟಿಸಿದ್ದ:

ಪಲ್ಲವಿ ತನ್ನ ಕೊಠಡಿಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿಯನ್ನು ಪೊಲೀಸರಿಗೆ ಚಕ್ರವರ್ತಿಯೇ ಮುಟ್ಟಿಸಿದ್ದ. ಇದು ಬಾಡಿಗೆಗೆ ಪಡೆದ ಫ್ಲಾಟ್ ಆಗಿದ್ದು, ಇಬ್ಬರು ಕೆಲ ಕಾಲದಿಂದ ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳ ಹಾಗೂ ಫ್ಲಾಟ್ ಸುತ್ತ ಮುತ್ತ ಯಾವುದೇ ಅನುಮಾನಾಸ್ಪದ ವಸ್ತು, ಸೂಸೈಡ್ ನೋಟ್ ಪತ್ತೆಯಾಗಿರಲಿಲ್ಲ, ವಿಸ್ತೃತ ಮರಣೋತ್ತರ ಪರೀಕ್ಷಾ ವರದಿ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವುದಾಗಿ ಗರ್ಫಾ ಪೊಲೀಸರು ತಿಳಿಸಿದ್ದರು. ಪ್ರಾಥಮಿಕ ಅಟಾಪ್ಸಿ ವರದಿಯಲ್ಲಿ ಆಕೆಯ ಕುತ್ತಿಗೆ ಮೇಲೆ ನೇಣು ಬಿಗಿದ ಗಾಯ ಬಿಟ್ಟರೆ, ಕತ್ತು ಹಿಸುಕಿದ್ದಾಗಲಿ, ದೈಹಿಕ ಹಿಂಸೆಗೊಳಗಾಗಿದ್ದಾಳೆ ಎಂಬುದಕ್ಕೆ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ. ಪಲ್ಲವಿ ಜೊತೆ ನಟಿಸಿದ ಕಿರುತೆರೆ ಕಲಾವಿದರು ಸೇರಿದಂತೆ ಹಲವರ ವಿಚಾರಣೆ ಜಾರಿಯಲ್ಲಿದೆ.

ಟಿವಿ ಸರಣಿ ರೇಶಮ್ ಜಾನ್ಪಿಯಲ್ಲಿ ನಟಿಸಿದ ನಂತರ ಪಲ್ಲವಿ ಜನಪ್ರಿಯ ಹೆಚ್ಚಾಯಿತು. ಸೀನ್ ಬ್ಯಾನರ್ಜಿ ಮುಖ್ಯ ಭೂಮಿಕೆಯಲ್ಲಿದ್ದ ‘ಅಮಿ ಸಿರಾರ್ ಬೇಗಂ’ ಎಂಬ ಟಿವಿ ಸರಣಿಯಲ್ಲಿ ಪಲ್ಲವಿ ಪಾತ್ರವಹಿಸಿದ್ದರು. ಐತಿಹಾಸಿಕ ಕಥಾನಕದಲ್ಲಿ ಕೆಲ ಎಪಿಸೋಡು ಕಾಣಿಸಿಕೊಂಡರೂ ಸೀನ್ ಹಾಗೂ ಪಲ್ಲವಿ ಜೋಡಿ ಜನಪ್ರಿಯ ಗಳಿಸಿತ್ತು. ನಟಿ ಪ್ರಸ್ತುತ ‘ಮೊನ್ ಮನೆ ನಾ’ ಕಾರ್ಯಕ್ರಮದಲ್ಲಿ ಪ್ರಧಾನ ಭೂಮಿಕೆಯಲ್ಲಿ ಆಕೆ ನಟಿಸುತ್ತಿದ್ದರು, ಇದರಲ್ಲಿ ಸಾಮ್ ಭಟ್ಟಾಚಾರ್ಯ ಮತ್ತು ಅಂಜನಾ ನೆಗಟಿವ್ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

MLC ಸ್ಥಾನಕ್ಕೆ ಇಬ್ರಾಹಿಂ ಬಿಗಿಪಟ್ಟು; ಜೆಡಿಎಸ್ ನಾಯಕರಿಗೆ ಶುರುವಾಯ್ತು ಇಕ್ಕಟ್ಟು...!

Wed May 18 , 2022
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿರುವ ಸಿ.ಎಂ. ಇಬ್ರಾಹಿಂ ಈಗ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾರೆ. ತಮಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕನ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ಅಸಮಾಧಾನಗೊಂಡು ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದರು. ಸಿ.ಎಂ. ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಿಂದ ಅಲ್ಪಸಂಖ್ಯಾತ ಮತಗಳನ್ನು ಗಳಿಸಲು ಸಹಾಯಕವಾಗುತ್ತದೆ ಎಂಬ ಕಾರಣಕ್ಕಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರು. ಇದೀಗ ಸಿ.ಎಂ. ಇಬ್ರಾಹಿಂ, ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ […]

Advertisement

Wordpress Social Share Plugin powered by Ultimatelysocial