ಪರಿಹಾರದ ನಿರೀಕ್ಷೆಯಲ್ಲಿದ್ದವನು ಬಂದ ಮೊತ್ತ ನೋಡಿ ಕಂಗಾಲು..!

ಯುಕೆನಲ್ಲಿ ಅರ್ವೆನ್ ಚಂಡಮಾರುತದ ಸಮಯದಲ್ಲಿ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಕಂಗಾಲಾಗಿದ್ದ ವ್ಯಕ್ತಿಗೆ ಯುಕೆ ಇಂಧನ ಪೂರೈಕೆದಾರರು ತಪ್ಪಾಗಿ 2 ಟ್ರಿಲಿಯನ್ ಪೌಂಡ್‌ಗಳ ಪರಿಹಾರದ ಚೆಕ್ ಅನ್ನು ಕಳುಹಿಸಿದ್ದಾರೆ.ಯುಕೆಯಲ್ಲಿ ಆರ್ವೆನ್ ಚಂಡಮಾರುತವು ವಿನಾಶವನ್ನು ಉಂಟುಮಾಡಿದಾಗ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಗರೆಥ್ ಹ್ಯೂಸ್ ಜೀವನ ನಡೆಸಿದ್ದರು.

ಇದಕ್ಕಾಗಿ ಆತ ಇಂಧನ ಪೂರೈಕೆದಾರರಿಂದ ಪರಿಹಾರ ನಿರೀಕ್ಷಿಸುತ್ತಿದ್ದ. ಆದರೆ ಆತನಿಗೆ 2 ಟ್ರಿಲಿಯನ್ ಪೌಂಡ್‌ಗಳ ಪರಿಹಾರದ ಚೆಕ್ ಅನ್ನು ಕಳುಹಿಸಿದಾಗ ದಿಗ್ಭ್ರಮೆಗೊಂಡಿದ್ದಾನೆ.

ಗರೆಥ್ ಹ್ಯೂಸ್ಗೆ, ನಾರ್ದರ್ನ್ ಪವರ್‌ಗ್ರಿಡ್ ಅವರಿಂದ ಕಳುಹಿಸಲಾದ ಚೆಕ್‌ನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಇಂಧನ ಪೂರೈಕೆದಾರರಿಂದ ತಪ್ಪಾದ ಚೆಕ್‌ಗಳನ್ನು ಪಡೆದಿದ್ದು ಹ್ಯೂಸ್ ಮಾತ್ರವಲ್ಲ, ಸುಮಾರು 75 ಮಂದಿಗೆ ಅದು ತಪ್ಪಾಗಿ ಚೆಕ್ ಗಳನ್ನು ಕಳುಹಿಸಿ ನಂತರ ಕ್ಷಮೆಯಾಚಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಪವರ್‌ಗ್ರಿಡ್ ಟ್ವೀಟ್‌ಗೆ ಪ್ರತ್ಯುತ್ತರಿಸಿದ್ದು, ತಪ್ಪನ್ನು ಎತ್ತಿ ತೋರಿಸಿದ್ದಕ್ಕಾಗಿ ಹ್ಯೂಸ್‌ಗೆ ಧನ್ಯವಾದ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BBMP ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿ; ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ಎಂದ ಹೈಕೋರ್ಟ್

Tue Feb 15 , 2022
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿಗೊಳಿಸಿದೆ.ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಪದೇ ಪದೇ ಗೈರಾಗುತ್ತಿದ್ದು, ಇಂದು ನಡೆದ ಅರ್ಜಿ ವಿಚಾರಣೆ ವೇಳೆಯೂ ಅನಾರೋಗ್ಯ ನೆಪವೊಡ್ಡಿ ವಿಚಾರಣೆಗೆ ಹಾಜರಾಗಿರಲಿಲ್ಲ.ಈ ಬಗ್ಗೆ ಪಾಲಿಕೆ ಪರ ವಕೀಲ ಶ್ರೀನಿಧಿ ಕೋರ್ಟ್ ಗೆ ಮಾಹಿತಿ ನೀಡುತ್ತಿದ್ದಂತೆ ಕೆಂಡಾಮಂಡಲರಾದ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ, […]

Advertisement

Wordpress Social Share Plugin powered by Ultimatelysocial