ಪತ್ನಿಯನ್ನು ಹತ್ಯೆಗೈದು ತಾನೂ ನೇಣಿಗೆ ಶರಣಾದ ಪತಿ

ಧಾರವಾಡ: ಪತ್ನಿಯನ್ನು ಹತ್ಯೆಗೈದು ಪತಿ ನೇಣಿಗೆ ಶರಣಾದಂತಹ ಘಟನೆ ನಡೆದಿದೆ.

 

ಧಾರವಾಡದ ಗಣೇಶ ನಗರದಲ್ಲಿ ಘಟನೆ ನಡೆದಿದ್ದು, ಕಳೆದ ರಾತ್ರಿ ದಂಪತಿ ಮಧ್ಯೆ ಗಲಾಟೆ ಹಿನ್ನೆಲೆ ಪತ್ನಿ ಮನೀಷಾ (25)ಳನ್ನು ಕೊಲೆ ಮಾಡಿದ್ದು, ಬಳಿಕ ಪತಿ ಗದಗವಾಲೆ(30) ನೇಣಿಗೆ ಶರಣಾಗಿದ್ದಾನೆ.

ನಾಲ್ಕು ದಿನಗಳ ಹಿಂದಷ್ಟೇ ದಂಪತಿಗಳಿಬ್ಬರು ಗೋವಾದಲ್ಲಿ ಕೆಲಸಕ್ಕೆ ಎಂದು ಹೋಗಿಬಂದಿದ್ದರು.

ಕಳೆದ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ರಾತ್ರಿಯೇ ಪತ್ನಿಯನ್ನ ಪತಿ ಕೊಲೆ ಮಾಡಿದ್ದಾನೆ. ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾತಿ, ಆದಾಯ ಪ್ರಮಾಣ ಪತ್ರಗಳು ವಿಭಿನ್ನ, ವಿಭಿನ್ನ: ಕರ್ನಾಟಕ ಹೈಕೋರ್ಟ್

Sun Mar 13 , 2022
ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಕಾಯ್ದೆಯಡಿ ನೀಡಲಾದ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರವು ಎರಡು ವಿಭಿನ್ನ ಮತ್ತು ವಿಭಿನ್ನ ಪ್ರಮಾಣಪತ್ರಗಳಾಗಿವೆ ಮತ್ತು ಎರಡನ್ನೂ ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಆಯ್ಕೆ ಪ್ರಾಧಿಕಾರ ಮತ್ತು ಕಾರ್ಯದರ್ಶಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಾಗ ಹೈಕೋರ್ಟ್‌ನ ಧಾರವಾಡ ಪೀಠವು ಇತ್ತೀಚಿನ ತೀರ್ಪಿನಲ್ಲಿ ಇದನ್ನು ಗಮನಿಸಿದೆ. ನ್ಯಾಯಮೂರ್ತಿ ಎಸ್ ಜಿ […]

Advertisement

Wordpress Social Share Plugin powered by Ultimatelysocial