ಪೆಟ್ರೋಲ್, ಡೀಸೆಲ್ ದರ ಜಾಸ್ತಿ ಮಾಡಿದ್ದಾಯ್ತು. ಇದೀಗ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದು ನಾಚಿಕೆಗೇಡು ಎಂದು ಜೆಡಿಎಸ್ ಹಿರಿಯ ಮುಖಂಡ ಮುಹಮ್ಮದ್ ಕುಞಿ ಕಿಡಿಕಾರಿದ್ದಾರೆ. ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಇನ್ಮುಂದೆ ಹೆಣಕ್ಕೂ, ಸುಡುವ ಕಟ್ಟಿಗೆಗೂ ಜಿಎಸ್ ಟಿ ಹಾಕಬಹುದು ಇವರು. ಈ ರೀತಿ ಆದ್ರೆ ಜನಸಾಮಾನ್ಯರು ಯಾವ ರೀತಿ ಜೀವನ ನಡೆಸಬೇಕು..? ಹಾಲು, ಮಜ್ಜಿಗೆ, ಮೊಸರು ಹೇಗೆ ಖರೀದಿ ಮಾಡೋದು..? ಹೀಗಾಗಿ ಇದನ್ನು ನಾವು ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಅವತ್ತು ಮೋದಿ ಮೋದಿ ಎಂದು ಜನರು ವೋಟ್ ಹಾಕಿದ್ರು. ಈ ಸಲ ಮೋದಿ ಮೋದಿ ಅಂದ್ರೆ ಯಾರೂ ವೋಟ್ ಕೊಡಲ್ಲ ಅಂದ್ರು.
ಇನ್ನು ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೊಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಆರೋಪಿಸಿದ್ದಾರೆ. ಜನ ಎಚ್ಚರಗೊಂಡಿದ್ದಾರೆ. ಹೀಗಾಗಿ ನಾವು ಜನರಿಗೆ ನ್ಯಾಯ ದೊರಕಿಸಿಕೊಡಲು ಪಕ್ಷವನ್ನು ಬಲವಾಗಿ ಸಂಘಟಿಸಲಿದ್ದೀವಿ ಅಂದ್ರು. ಶೀಘ್ರದಲ್ಲೇ ಜಿಎಸ್ ಟಿ ವಿರುದ್ದ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಜೆಡಿಎಸ್ ಮಾಡಲಿದೆ ಎಂದ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: