ಹಂದಿಗಳ ಹಾವಳಿಯಿಂದ ಮಗುವನ್ನು ಕಚ್ಚಿದ ಹಂದಿ, ಮಾನ್ವಿ ಪಟ್ಟಣದ 25ನೆ ವಾಡ್೯ ನಲ್ಲಿ ನಡೆದೆ ಘಟನೆ. ಮಾನ್ವಿ ಪುರಸಭೆ ಮುಖ್ಯಾಧಿಕಾರಿಗೆ ಹಲವಾರು ಭಾರಿ ತಿಳಿಸಿದರು ಮೌನ, ಮಕ್ಕಳಿಗೆ ಕಚ್ಚಿರುವ ಪ್ರಕರಣ ಹಲವಾರು ಭಾರಿ ನಡೆದಿದ್ದು, ಪುರಸಭೆ ಮುಖ್ಯಾಧಿಕಾರಿ ಮೌನ. ರಾಯಚೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಂದಿಗಳ ಹಾವಳಿಯಿಂದ ಸಾರ್ವಜನಿಕರಲ್ಲಿ ಹೆಚ್ಚಿದ ಭಯ.
ಮಾನ್ವಿ ಪಟ್ಟಣದ 25 ನೆ ವಾಡ್೯ನ ಇಮ್ರಾನ್ ಎಂಬುವವರ ಪುತ್ರಿ ಅಮೇರಾಗೆ ಹಂದಿ ಕಚ್ಚಿದೆ. ಮಾನ್ವಿ ಪಟ್ಟಣದ ನಾನಾ ವಾಡ್೯ಗಳಲ್ಲಿ ಹಂದಿಗಳ ಹಾವಳಿಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾನ್ವಿ ಪುರಸಭೆ ಮುಖ್ಯಾಧಿಕಾರಿಗೆ ಸಾರ್ವಜನಿಕರು ಹಲವಾರು ಭಾರಿ ಹಂದಿಗಳು ಕಚ್ಚುತ್ತಿದ್ದು ಕ್ರಮ ಜರುಗಿಸಿ ಎಂದು ಮನವಿ ಸಲ್ಲಿಸಿದರು ಸಹ ಪ್ರಯೋಜನ ಇಲ್ಲವಾಗಿದೆ ಎಂದು ರಿಜ್ವಾನ್ ಎಂಬುವವರು ಆರೋಪಿಸಿದ್ದಾರೆ. ಮಗುಗೆ ಹಂದಿ ಕಚ್ಚಿದ್ದರಿಂದ ಪೋಷಕರು ಆತಂಕದಲ್ಲಿದ್ದು, ನಮ್ಮ ಮಗುಗೆ ಏನಾದರೂ ಹೆಚ್ವು ಕಡಿಮೆಯಾದರೆ ಯಾರು ಹೊಣೆ ಎಂದು ಕಿಡಿಕಾರಿದರು.
https://play.google.com/store/apps/details?id=com.speed.newskannada