ಹೊಸದಿಲ್ಲಿ: ವರ್ಷಗಳ ಹಿಂದೆ ಮಂಜೂರು ಮಾಡಲಾಗಿದ್ದ ಸರಕಾರಿ ವಸತಿಗಳನ್ನು 2014 ರಲ್ಲಿ ರದ್ದುಪಡಿಸಿದರೂ ಇನ್ನೂ ತಂಗಿರುವ ಎಂಟು ಪ್ರಖ್ಯಾತ ಕಲಾವಿದರಿಗೆ ಮೇ 2 ರೊಳಗೆ ಮನೆ ಖಾಲಿ ಮಾಡುವಂತೆ ಕೇಂದ್ರ ಸರಕಾರವು ಬುಧವಾರ ಸೂಚಿಸಿದೆ.
90 ವರ್ಷಗಳ ವಯಸ್ಸಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಒಡಿಸ್ಸಿ ನೃತ್ಯಗಾರ ಗುರು ಮಾಯಾಧರ್ ರಾವತ್ ಅವರನ್ನು ಸರಕಾರಿ ಬಂಗಲೆಯಿಂದ ತೆರವುಗೊಳಿಸುವ ಪ್ರಕ್ರಿಯೆ ನಡೆಸಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ಹಲವಾರು ಸೂಚನೆಗಳ ಹೊರತಾಗಿಯೂ ತಮ್ಮ ಸರಕಾರಿ ಬಂಗಲೆಯಿಂದದ ಹೊರಬಂದಿಲ್ಲ ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
“ಈ ಎಂಟು ಕಲಾವಿದರು ತಮ್ಮ ಬಂಗಲೆಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ನಮಗೆ ಭರವಸೆ ನೀಡಿದರು ಹಾಗೂ ಇನ್ನೂ ಕೆಲವು ದಿನಗಳನ್ನು ಕೋರಿದರು. ಅವರು ಮೇ 2 ರೊಳಗೆ ವಸತಿ ಸೌಲಭ್ಯಗಳನ್ನು ಖಾಲಿ ಮಾಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದಾರೆ ಹಾಗೂ ನಾವು ಅವರಿಗೆ ಸಮಯ ನೀಡಿದ್ದೇವೆ” ಎಂದು ಅಧಿಕಾರಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: