ಹ್ಯಾಟ್ರಿಕ್ ಸೋಲು ಕಂಡ ಬಹುಬೇಡಿಕೆ ನಟಿ ಪೂಜಾ ಹೆಗ್ಡೆ..! ಯಾಕೋ ಪೂಜಾ ಹೆಗ್ಡೆ ಅದೃಷ್ಟವೇ ಸರಿ ಇಲ್ಲ ಎಂದ ನೆಟ್ಟಿಗರು

 

ಕನ್ನಡತಿ, ದಕ್ಷಿಣದ ಖ್ಯಾತ ಸ್ಟಾರ್ ನಟಿ ಪೂಜಾ ಹೆಗಡೆ ಸಾಲು ಸಾಲು ಸಿನಿಮಾಗಳ ಸೋಲಿನಿಂದಾಗಿ ಕಂಗೆಟ್ಟಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರು ಸ್ಟಾರ್ ನಟರ ಜತೆಯೇ ತೆರೆ ಹಂಚಿಕೊಂಡಿದ್ದರೂ, ಚಿತ್ರಗಳ ಸೋಲಿನಿಂದಾಗಿಯೇ ಪೂಜಾ ನೊಂದುಕೊಂಡಿದ್ದಾರೆ. ಆದರೂ, ತಮಗೆ ಸಿಗುತ್ತಿರುವ ಅವಕಾಶಗಳಿಗೇನೂ ಕಡಿಮೆ ಇಲ್ಲ ಎಂದೂ ಹೇಳಿಕೊಂಡಿದ್ದಾರೆ.

ಪ್ರಭಾಸ್ ಜೊತೆ ನಟಿಸಿದ್ದ ‘ರಾಧೆ ಶ್ಯಾಮ್’ ಸಿನಿಮಾ ಅಂದುಕೊಂಡಷ್ಟು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಲಿಲ್ಲ. ಚಿತ್ರಕ್ಕೆ ಒಂದೊಳ್ಳೆ ವಿಮರ್ಶೆ ಕೂಡ ಬರಲಿಲ್ಲ.

ಪ್ರಭಾಸ್ ಮತ್ತು ಪೂಜಾ ಹಿಟ್ ಜೋಡಿ ಆಗುವ ಕನಸನ್ನು ನುಚ್ಚು ನೂರು ಮಾಡಿತು ರಾಧೆ ಶ್ಯಾಮ್ ಸಿನಿಮಾ. ನಂತರ ಬಂದ ವಿಜಯ್ ಜತೆಗಿನ ಬಿಸ್ಟ್ ಕೂಡ ಪೂಜಾರನ್ನು ಕೈ ಹಿಡಿಯಲಿಲ್ಲ. ಓಪನಿಂಗ್ ಚೆನ್ನಾಗಿಯೇ ತಗೆದುಕೊಂಡರೂ, ನಂತರ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಸೋಲುಂಡಿತು. ಮೊನ್ನೆಯಷ್ಟೇ ರಿಲೀಸ್ ಆಗಿರುವ ಆಚಾರ್ಯ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಇದೇ ವರ್ಷದಲ್ಲೇ ತೆರೆಕಂಡ ಈ ಮೂರು ಸಿನಿಮಾಗಳು ಭಾರೀ ಬಜೆಟ್ ಚಿತ್ರಗಳಾಗಿದ್ದವು.

ಇದ್ದವರೆಲ್ಲ ಸೂಪರ್ ಸ್ಟಾರ್ ಗಳು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರಗಳನ್ನು ರಿಲೀಸ್ ಮಾಡಲಾಗಿತ್ತು. ಆದರೂ, ಪೂಜಾ ಅವರ ಅದೃಷ್ಟವನ್ನು ಈ ಸಿನಿಮಾಗಳು ಬದಲಿಸಲಿಲ್ಲ. ಹೀಗೆಲ್ಲ ಆದರೂ, ಅವರಿಗೆ ಅವಕಾಶಗಳಿಗೇನೂ ಕೊರತೆ ಆಗಿಲ್ಲವಂತೆ. ಬಾಲಿವುಡ್ ನಿಂದಲೂ ಆಫರ್ ಬರುತ್ತಿದ್ದು, ಪಾತ್ರಗಳಿಗೆ ಗಟ್ಟಿತನವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಪೂಜಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಡವ ರಾಸ್ಕಲ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ!

Sat May 7 , 2022
  ಬಡವ ರಾಸ್ಕಲ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಧನಂಜಯ್ ಅವರ ಹಲವು ಸಿನಿಮಾಗಳು ಈ ವರ್ಷ ಬಿಡುಗಡೆಗೆ ತಯಾರಾಗುತ್ತಿವೆ. ಧನಂಜಯ್ ನಟನೆಯ ಕನ್ನಡ-ಮಲಯಾಳಂ ದ್ವಿಭಾಷಾ ಟ್ವೆಂಟಿ ಒನ್ ಅವರ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಮೇ 2 ರಂದು ಸಿನಿಮಾ ರಿಲೀಸ್ ಆಗಲಿದೆ. ಈ ನಿಯೋ -ನಾಯರ್ ಥ್ರಿಲ್ಲರ್ ಸಿನಿಮಾವನ್ನು ಜೈಶಂಕರ್ ನಿರ್ದೇಶಿಸಿದ್ದಾರೆ. ಮಲಯಾಳಿ ಮಹಿಳೆ ನಾಪತ್ತೆ ಪ್ರಕರಣ ಕುರಿತ ಕಥೆ ಇದಾಗಿದೆ. ಧನಂಜಯ್ ಈ ಪ್ರಕರಣದ ತನಿಖೆ ನಡೆಸುವ […]

Advertisement

Wordpress Social Share Plugin powered by Ultimatelysocial