ದೂರದರ್ಶನ ವಾಹಿನಿಯಲ್ಲಿ 1988ರಲ್ಲಿ ಆರಂಭಗೊಂಡಿದ್ದ ಮಹಾಭಾರತ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

 

ನವದೆಹಲಿ: ದೂರದರ್ಶನ ವಾಹಿನಿಯಲ್ಲಿ 1988ರಲ್ಲಿ ಆರಂಭಗೊಂಡಿದ್ದ ಮಹಾಭಾರತ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅದರಲ್ಲಿ ನಟಿಸಿದ್ದ ನಟರನ್ನೇ ನಿಜವಾದ ‘ದೇವರು’ ಎಂದುಕೊಂಡವರಿಗೂ ಕಮ್ಮಿಯೇನಿಲ್ಲ. ಅಂಥವರಲ್ಲಿ ಒಬ್ಬರಾಗಿದ್ದುದು ಭೀಮನ ಪಾತ್ರದ ಮೂಲಕ ಮನೋಜ್ಞ ಅಭಿನಯ ನೀಡಿದ್ದ ನಟ ಪ್ರವೀಣ್ ಕುಮಾರ್ ಸೋಬ್ತಿ.ದೀರ್ಘಕಾಲದ ಎದೆ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ಪ್ರವೀಣ್‌ ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ನವದೆಹಲಿಯ ಅಶೋಕ್ ವಿಹಾರ್ ನಿವಾಸದಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ.ಇವರು ನಟ ಮಾತ್ರವಲ್ಲದೇ ಕ್ರೀಡಾಪಟುಗಳು. ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದು ಖ್ಯಾತಿ ಪಡೆದಿದ್ದರು. ಸೋಮವಾರ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯರನ್ನು ಮನೆಗೆ ಕರೆಸಲಾಗಿತ್ತು. ಆದರೆ ಅದೇ ವೇಳೆಗಾಗಲೇ ಅವರು ಮೃತಪಟ್ಟಿದ್ದರು.ಪ್ರವೀಣ್ ಅವರು, ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ವಿವಿಧ ಅಥ್ಲೆಟಿಕ್ ಈವೆಂಟ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 1966 ಮತ್ತು 1970ರಲ್ಲಿ ಎರಡು ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಪದಕ ಗೆದ್ದಿದ್ದರು. ಅವರು 1966ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅವರು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಇವರಿಗೆ ಪತ್ನಿ, ಮಗಳು, ಇಬ್ಬರು ತಮ್ಮಂದಿರು ಮತ್ತು ಅಕ್ಕ ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿರೇನ್​ ಸಿಂಗ್​​ರ ಅಳಿಯ ಆರ್​​.ಕೆ ಇಮೋ ಸಿಂಗ್​​ ಚುನಾವಣಾ ಅಫಿಡವಿಟ್​ ಸಲ್ಲಿಸಿದ್ದರು!

Tue Feb 8 , 2022
ಮಣಿಪುರ ಸಿಎಂ ಎನ್​. ಬಿರೇನ್​ ಸಿಂಗ್​​ರ ಅಳಿಯ ಆರ್​​.ಕೆ ಇಮೋ ಸಿಂಗ್​​ ಚುನಾವಣಾ ಅಫಿಡವಿಟ್​ ಸಲ್ಲಿಸಿದ್ದು ಇದರಲ್ಲಿ ತಮ್ಮ ಬಳಿ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬುದನ್ನು ಘೋಷಣೆ ಮಾಡಿದ್ದಾರೆ. ತಮ್ಮ ಮಾವ ಸಿಎಂ ಎನ್​ ಬಿರೇನ್​ ಸಿಂಗ್​​ಗಿಂತ ಇಮೋ ಸಿಂಗ್​ ಐದು ಪಟ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.ಆರ್​.ಕೆ ಇಮೋ ಸಿಂಗ್​ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸಗೋಲ್​ ಬಂದ್​ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮಣಿಪುರ ಸಿಎಂ ಬಿರೇನ್​​ […]

Advertisement

Wordpress Social Share Plugin powered by Ultimatelysocial