ಪ್ರತಿಪಕ್ಷಗಳ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ ‘ಸಹೋದರರ ಪೈಪೋಟಿ’ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ‘ನನ್ನ ಸಹೋದರನಿಗಾಗಿ ನಾನು ನನ್ನ ಪ್ರಾಣವನ್ನು ನೀಡಬಲ್ಲೆ ಮತ್ತು ಅವನು ನನಗಾಗಿ ಏನು ಬೇಕಾದ್ರೂ ಮಾಡಬಹುದು, ಇಲ್ಲಿ ಆಂತರಿಕ ಕಲಹ ಎಲ್ಲಿದೆ?ಎಂದು ಹೇಳಿದ್ದಾರೆ. ಯೋಗಿ ಆದಿತ್ಯನಾಥ್, ಪಿಎಂ ಮೋದಿ ಮತ್ತು ಅಮಿತ್ ಶಾ ನಡುವಿನ ಆಂತರಿಕ ಜಗಳವನ್ನು ಎದುರಿಸುತ್ತಿರುವುದು ಬಿಜೆಪಿಯೇ (BJP ಹೊರತು ಕಾಂಗ್ರೆಸ್ (Congress) ಅಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಈ ಹಿಂದೆಯೂ ಪ್ರತಿಪಕ್ಷಗಳ ಹಲವು ಆರೋಪಕ್ಕೆ ತಿರುಗೇಟು ನೀಡಿರೋ ಪ್ರಿಯಾಂಕಾ ಒಡಹುಟ್ಟಿದವರು ಪರಸ್ಪರ ಆಸರೆಯಾಗಿ ನಿಂತಿರುವುದು ಇದೇ ಮೊದಲಲ್ಲ ಎಂದ್ರು.‘ನನ್ನ ಜೊತೆ ನನ್ನ ಇಡೀ ಕುಟುಂಬವಿದೆ’ಪ್ರಿಯಾಂಕಾ ತನ್ನ ಸಹೋದರನ ನಡುವಿನ ನಿಕಟ ಬಾಂಧವ್ಯ ರಕ್ಷಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. “ಸಹೋದರಿಯರು ಒಟ್ಟಿಗೆ ನಿಂತಿದ್ದಾರೆ, ಎಲ್ಲಾ ಸಮಯದಲ್ಲೂ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾರೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದ್ರು. ಕುಟುಂಬದ ಮೌಲ್ಯಗಳು ಬಲವಾದ ಸಕಾರಾತ್ಮಕ ಸಂದೇಶವನ್ನು ಕಳುಹಿಸುತ್ತದೆ. ಇಂದು ಅವರನ್ನು ಒಟ್ಟಿಗೆ ನೋಡುವುದು ಮತ್ತು ಒಟ್ಟಿಗೆ ಕೆಲಸ ಮಾಡುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.’ನಾವು ಒಟ್ಟಿಗೆ ನರಕವನ್ನು ಅನುಭವಿಸಿದ್ದೇವೆ’ಗಾಂಧಿ ಕುಟುಂಬದಲ್ಲಿನ ರಾಜಕೀಯ ಏರಿಳಿತಗಳು ಒಡಹುಟ್ಟಿದವರ ಸಂಪರ್ಕದಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಾವು ಒಟ್ಟಿಗೆ ನರಕವನ್ನು ಅನುಭವಿಸಿದ್ದೇವೆ. ನಮಗೆ ಎಲ್ಲವೂ ಸುಲಭ ಎಂದು ಎಲ್ಲರೂ ಭಾವಿಸುತ್ತಾರೆ ಆದರೆ ನಾವು ಕೆಲವು ಕಠಿಣ ಸಂದರ್ಭಗಳನ್ನು ನೋಡಿದ್ದೇವೆ. ಅದು ನಮ್ಮನ್ನು ಒಟ್ಟುಗೂಡಿಸಿದೆ ಎಂದು ರಾಹುಲ್ ಗಾಂಧಿ ಇದೇ ಸಮಾವೇಶದಲ್ಲಿ ಹೇಳಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: