ದ್ವಿತೀಯ ಪಿಯುಸಿ ಪಠ್ಯ ಕಡಿತ : ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಸಭೆ

ಬೆಂಗಳೂರು : ದ್ವಿತೀಯ ಪಿಯುಸಿ ಪಠ್ಯ ಕಡಿತದ ಕುರಿತಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಇಲಾಖೆ ಪರಿಶೀಲನಾ ಸಭೆ ನಡೆಸಲಿದೆ.ಇಂದು ಪಿಯು ಬೋರ್ಡ್ ಅಧಿಕಾರಿಗಳ ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಸಭೆ ನಡೆಸಲಿದ್ದು, ದ್ವಿತೀಯ ಪಿಯುಸಿ ಪಠ್ಯ ಕಡಿತದ ಕುರಿತಂತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.ವಿದ್ಯಾರ್ಥಿಗಳು ಮತ್ತು ಪೋಷಕರು ಪಠ್ಯ ಕಡಿತ ಮಾಡುವಂತೆ ಮನವಿ ಮಾಡಿದ್ದು, ಶೇ 20 ರಷ್ಟು ಪಠ್ಯ ಕಡಿತ ಮಾಡಬೇಕಾ? ಅಥವಾ ಪರ್ಯಾಯ ಅನುಕೂಲ ಮಾಡಬೇಕಾ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಶೇ. 20 ರಷ್ಟು ಭಾಷ ವಿಷಯಗಳ ಪಠ್ಯ ಕಡಿತ ಮಾಡಲಾಗಿದ್ದು, ಈಗ ಐಚ್ಛಿಕ ವಿಷಯ ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮನವಿ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

8 ರೈಲುಗಳು ಸಂಚಾರ ರದ್ದು.ಪ್ರಯಾಣಿಕರ ಗಮನಕ್ಕೆ ಕರ್ನೂಲ್ ಸಿಟಿ-ಕಾಚಿಗುಡ.

Thu Feb 3 , 2022
    ವಿವಿಧ ಕಾರಣಗಳಿಂದ ದಕ್ಷಿಣ ಮಧ್ಯ ರೈಲ್ವೆ ಯ 8 ರೈಲುಗಳ ಸಂಚಾರವನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ. ಎರಡು ರೈಲುಗಳನ್ನು ವಿವಿಧ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಕ್ಯಾನ್ಸಲ್ ಆಗಿರುವ ರೈಲುಗಳ ಸಂಪೂರ್ಣ ವಿವರ ಇಲ್ಲಿದೆರೈಲು ಸಂಖ್ಯೆ 17435: ಫೆಬ್ರವರಿ 8 ಮತ್ತು ಫೆಬ್ರವರಿ 9 ರಂದು ಕಾಚಿಗುಡ-ಕರ್ನೂಲ್ ಸಿಟಿ ರೈಲನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ. ರೈಲು No.17436: ಫೆಬ್ರವರಿ 8 ಮತ್ತು 9 ರಂದು ಕರ್ನೂಲ್ ಸಿಟಿ-ಕಾಚಿಗುಡ ರೈಲನ್ನು […]

Advertisement

Wordpress Social Share Plugin powered by Ultimatelysocial