ಅಪ್ಪುಗೆ ಅಭಿನಂದನಾ ಪತ್ರ ಬರೆದ ಸರ್ಕಾರಿ ಶಾಲೆ

ಸರ್ಕಾರಿ ಶಾಲೆಗೆ ಪವರ್ ಸ್ಟಾರ್ ಧನ ಸಹಾಯ

ತಮ್ಮ ತಂದೆ ಡಾ.ರಾಜ್ ಕುಮಾರ್ ಅವರಂತೆಯೇ ಅಭಿಮಾನಿಗಳನ್ನೇ ನಮ್ಮನೆ ದೇವ್ರು ಅಂತ ಕರೆದವರು ದೊಡ್ಮನೆಯ ಮುದ್ದಿನ ಮಗ, ಕರುನಾಡ ರಾಜರತ್ನ ಪುನೀತ್ ರಾಜ್ ಕುಮಾರ್.. ತಮ್ಮ ಅದ್ಭುತ ನಟನೆ ಮೂಲಕ ಜನಮನ ಗೆದ್ದಿರುವ ಅಪ್ಪು, ಆಗಾಗ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿರ್ತಾರೆ.. ಇದೀಗ ಮತ್ತೊಂದು ಉತ್ತಮ ಕಾರ್ಯವನ್ನ ಮಾಡೋದ್ರ ಮೂಲಕ ದೊಡ್ಮನೆ ಹುಡುಗ ತಮ್ಮ ದೊಡ್ಡತನವನ್ನ ಮೆರೆದಿದ್ದಾರೆ..

ಸರ್ಕಾರಿ ಶಾಲೆಯ ಸುಧಾರಣೆಗೆ ಪವರ್ ಸ್ಟಾರ್ ಸಾಥ್

ಲಾಕ್ ಡೌನ್ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.. ಅಪ್ಪು ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಜೇಮ್ಸ್.. ಬಳ್ಳಾರಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುವ ವೇಳೆ ಕೆಲ ದಿನಗಳ ಹಿಂದಷ್ಟೇ, ಅಲ್ಲಿ ಕೊರೋನಾ ಜಾಗೃತಿ ಅಭಿಯಾನಕ್ಕೆ ಸಾಥ್ ಕೊಟ್ಟು ಎಲ್ಲರ ಗಮನ ಸೆಳೆದಿದ್ರು.. ಅದಾದ ಬಳಿಕ ಇತ್ತೀಚೆಗೆ ಅಪ್ಪು ಮಾಡಿರುವ ಮತ್ತೊಂದು ಕಾರ್ಯಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು ಇನ್ನಷ್ಟು ಸುಧಾರಣೆಗೊಳ್ಳುವ ಅವಶ್ಯಕತೆ ಇದೆ.. ಹೀಗಿರೋವಾಗ ಅಪ್ಪು ಗಂಗಾವತಿಯಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಧನಸಹಾಯ ಮಾಡುವ ಮೂಲಕ ಆ ಶಾಲೆಯ ಬೆಳವಣಿಗೆಗೆ ನೆರವಾಗಿದ್ದಾರೆ..

ಗಂಗಾವತಿಯ ಮ್ಲಲಾಪುರದ ಸರ್ಕಾರಿ ಶಾಲೆಗೆ 1 ಲಕ್ಷ ರೂ ದೇಣಿಗೆ

ಎಸ್, ತಮ್ಮ ಸಿನಿಮಾಗಳ ಮೂಲಕ ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿರುವ ಪುನೀತ್ ರಾಜ್ ಕುಮಾರ್ ಸಾಮಾಜಿಕ ಕಾರ್ಯಗಳನ್ನ ಮಾಡೋದ್ರಲ್ಲಿ ಸದಾ ಮುಂದಿರ್ತಾರೆ.. ಯಾವುದೇ ಪ್ರಚಾರ ಬಯಸದೇ, ಸಮಾಜ್ಕಕೆ ತಮ್ಮಿಂದಾಗುವ ಸಹಾಯವನ್ನ ಮಾಡಿಬಿಡ್ತಾರೆ ಅಪ್ಪು.. ಕೆಲ ತಿಂಗಳ ಹಿಂದಷ್ಟೇ, ರಾಜ್ಯ ಸರ್ಕಾಕ್ಕೆ ಪುನೀತ್ ರಾಜ್ ಕುಮಾರ್ 50 ಲಕ್ಷ ರೂ ದೇಣೀಗೆ ನೀಡಿದ್ರು.. ಇದೀಗ ಗಂಗಾವತಿಯ ಮಲ್ಲಾಪುರದ ಸರ್ಕಾರಿ ಶಾಲೆಯೊಂದಕ್ಕೆ ಆರ್ಥಿಕ ನೆರವು ನೀಡಿದ್ದಾರೆ..

ಇತ್ತೀಚೆಗೆ ಗಂಗಾವತಿಯಲ್ಲಿ ಅಪ್ಪು ನಟನೆಯ ಜೇಮ್ಸ್ ಚಿತ್ರದ ಶೂಟಿಂಗ್ ನಡೆದಿತ್ತು.. ತಮ್ಮ ಸಿನಿಮಾ ಶೂಟಿಂಗ್ ಬ್ಯುಸಿಯ ನಡುವೆ ಪವರ್ ಸ್ಟಾರ್ ಅಲ್ಲಿನ ಸರ್ಕಾರಿ ಪ್ರೌಢ ಶಾಲೆಗೆ ಒಂದು ಲಕ್ಷ ರೂ ಧನ ಸಹಾಯ ಮಾಡಿದ್ದಾರೆ..

ಅಪ್ಪುಗೆ ಅಭಿನಂದನಾ ಪತ್ರ ಬರೆದ ಸರ್ಕಾರಿ ಶಾಲೆ

ಮಲ್ಲಾಪುರದ ಸರ್ಕಾರಿ ಶಾಲೆಗೆ ನಟ ಪುನೀತ್ ರಾಜ್ ಕುಮಾರ್ ಅವರ ಧನಸಹಾಯಕ್ಕೆ ಶಾಲೆಯು ಅಪ್ಪುಗೆ ಅಭಿನಂದನಾ ಪತ್ರವನ್ನ ಬರೆದಿದೆ.. ಆ ಲೆಟರ್ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.. ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಸುಪುತ್ರರಾದ ಮಾನ್ಯ ಪುನೀತ್ ರಾಜ್ ಕುಮಾರ್ ಮತ್ತು ಜೇಮ್ಸ್ ಚಿತ್ರತಂಡವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಯಕ್ಷಣಿಕ ಬೆಳವಣಿಗೆಗಾಗಿ, ನಮ್ಮ ಶಾಲೆಯ ಕಲಿಕಾ ವಾತಾವರಣವನ್ನು ಉತ್ತೇಜಿಸಲು ಹಾಗೂ ವಿದ್ಯಾರ್ಥಿ ಗಳಿಗೆ ಕಲಿಕಾ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಕ್ಟೋಬರ್ 21ರಂದು ಒಂದು ಲಕ್ಷ ಪ್ರೋತ್ಸಾಹ ಧನವನ್ನು ನೀಡಿರುತ್ತಾರೆ.. ಕಾರಣ ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ತಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.. ತಮ್ಮ ಅಭಿನಯದ ಜೇಮ್ಸ್ ಚಿತ್ರಕ್ಕೆ ಯಶಸ್ಸು ಸಿಗಲೆಂದು ಶುಭ ಕೋರುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.. ಹೀಗೆ ಬರೆಯುವ ಮೂಲಕ ಶಾಲೆಗೆ ಧನಸಹಾಯ ಮಾಡಿದ ಅಪ್ಪುಗೆ ತಮ್ಮ ಅಭೀನಂದನೆಗಳನ್ನ ತಿಳಿಸಿದೆ..

ಇನ್ನೂ ಅದೇ ಪತ್ರದಲ್ಲಿ ನಿಮ್ಮ ಪ್ರೀತಿಯ ಪುನೀತ್ ರಾಜ್ ಕುಮಾರ್ ಎಂದು ಅಪ್ಪು ಕೂಡ ಬರೆದು ಸಹಿ ಮಾಡಿದ್ದಾರೆ.. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪತ್ರ ವೈರಲ್ ಆಗಿದ್ದು, ಅಪ್ಪು ಮಾಡಿರುವ ಈ ಉತ್ತಮ ಕಾರ್ಯವನ್ನ ನೋಡಿ ಅವರ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.. ಜೊತೆಗೆ ಈ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಪುನೀತ್ ರಾಜ್ ಕುಮಾರ್ ಅವರ ಕಾರ್ಯವನ್ನ ಶ್ಲಾಘಿಸಿ ಕಾಮೆಂಟ್ ಮಾಡ್ತಿದ್ದಾರೆ..

ಇದನ್ನ ಓದಿ:`ರಾಬರ್ಟ್’ ಕೊಟ್ಟ ಸ್ವೀಟ್ ನ್ಯೂಸ್ 

Please follow and like us:

Leave a Reply

Your email address will not be published. Required fields are marked *

Next Post

ಜಡೇಜಾ ‘ಜಾದು’ಗೆ ಒಲಿದ ಜಯ, ಮಾಹಿ ಪಡೆ ಗೆಲುವಿನ ಕೇಕೆ ಹಾಕಿತು

Fri Oct 30 , 2020
ನಿನ್ನೆ ನಡೆದ ಐಪಿಎಲ್ ಮಹಾ ಸಮರದಲ್ಲಿ ಮಾಹಿ ಪಡೆ ಗೆಲುವಿನ ಕೇಕೆ ಹಾಕಿತು. ಕೊನೆಯ ಬಾಲ್ ತನಕ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಚೆನ್ನೈ ತಂಡವು ಗೆಲುವಿನ ನಗೆ ಬೀರಿತು.ಡೆತ್ ಓವರ್ ನಲ್ಲಿ ಜಡೇಜಾ ಆರ್ಭಟಿಸಿ ಕೆಕೆಆರ್ ತಂಡದ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು. ಇದರಿಂದ ಮಾರ್ಗನ್ ಪಡೆಯ ಪ್ಲೇ ಆಫ್ ಕನಸು ಕಮರಿ ಹೋಯಿತು.. ಕೊಲ್ಲಿ ಕದನದಲ್ಲಿ ನಿನ್ನೆಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ […]

Related posts

Advertisement

Wordpress Social Share Plugin powered by Ultimatelysocial