ನಟ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿ 4 ದಿನಗಳು ಕಳೆಯುತ್ತಿದ್ದರೂ, ಜನಕ್ಕೆ ಅವರ ಸಾವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಬ್ಬಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕೇಂದ್ರ ಸರ್ಕಾರ ಪತ್ರ ಬರೆಯುವುದಾಗಿ ತಿಳಿಸಿದರು. ಪುನೀತ್ ರಾಜ್ ಕುಮಾರ್ ದಿವಂಗತ ನಟಸಾರ್ವಭೌಮ ರಾಜ್ ಕುಮಾರ ಅವರ ಪುತ್ರ. ಮೊನ್ನೆ ನಿಧನರಾದರು, ಅವರದ್ದು ಸಾಯುವ ವಯಸ್ಸಲ್ಲ. ಪ್ರತಿಭಾವಂತ ಸಿನಿಮಾ ನಟ ಪುನೀತ್ಗೆ ಕಲೆ ರಕ್ತಗತವಾಗಿ ಬಂದಿತ್ತು.ರಾಜ್ ಕುಮಾರ್ ಶ್ರೇಷ್ಠ ನಟ, ದೇಶಕಂಡ ಶ್ರೇಷ್ಠ ನಟ. ಅದಕ್ಕೆ ಅವರಿಗೆ ಫಾಲ್ಕೆ ಪ್ರಶಸ್ತಿ ರಾಜ್ ಕುಮಾರ್ ರಿಗೆ ಸಿಕ್ಕಿತು. ಇತ್ತಿಚೆಗೆ ರಜನಿಕಾಂತ್ ಅವರಿಗೆ ಸಿಕ್ಕಿದೆ, ಅವರು ಕನ್ನಡಿಗರೇ ಎಂದರು.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada