`ಜೇಮ್ಸ್​’ ಚಿತ್ರ ರಿಲೀಸ್​ ಆಗೇ ಆಗುತ್ತೆ ಎಂದು ಅಪ್ಪು ಫ್ಯಾನ್ಸ್ ಗೆ ಭರವಸೆ ಕೊಟ್ಟ ನಿರ್ದೇಶಕ ಚೇತನ್​..!

ಪವರ್​ ಸ್ಟಾರ್​ ಅಪ್ಪು ಇನ್ನೂ ನೆನಪು ಮಾತ್ರ. ಕನ್ನಡ ಚಿತ್ರರಂಗದ ಮಗನಂತಿದ್ದ ಅಪ್ಪುನ  ಕಳೆದುಕೊಂಡು, ಇಡೀ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿದೆ. ಪ್ರತಿಯೊಂದು ಮನೆಯಲ್ಲೂ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಸದಾ ನಗುಮುಖದಿಂದಲೇ ಮಾತನಾಡುತ್ತಿದ್ದ, ಅಪ್ಪು ಅವರ ನಗು ಮುಖವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನ ಪಡೆದ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಎಲ್ಲಾ ಭಾಷೆಯ ನಟ, ನಟಿಯರು ಆಗಮಿಸಿ ಕೊನೆ ಬಾರಿ ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್​ವುಡ್​​ನ ಲ್ಲಿ ಅಪ್ಪು ಬಹುಬೇಡಿಕೆ ನಟ ಆಗಿದ್ದರು, ಅವರು ಮಾಡಿದ  ಪ್ರತಿಯೊಂದು ಸಿನಿಮಾ ಕೂಡ ಸೂಪರ್​ ಹಿಟ್.​ ಸೋಲನ್ನೇ ನೋಡಿರದ ಅಪ್ಪು, ಇಂದು ವಿಧಿಯ ಮುಂದೆ ಸೋತು ಸುಮ್ಮನೆ ಮಲಗಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಫ್ಯಾ,ಮಿಲಿ ಪೂರ್ತಿ ಚಿತ್ರಮಂದಿರಕ್ಕೆ ಬಂದು ಅಪ್ಪು ಸಿನಿಮಾವನ್ನು ನೋಡುತ್ತಿದ್ದರು. ಅವರ ಕಾಲ್​ ಶೀಟ್ ಪಡೆಯಲು ನಿರ್ಮಾಪಕರು ಕಾದು ಕೂರುತ್ತಿದ್ದರು, ಅಪ್ಪು ಅಗಲಿಕೆಗೂ ಮುನ್ನ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಕೇಲ್ ವಾನ್ ಹೇಳಿದ ಭವಿಷ್ಯ ನಿಜವಾಗುತ್ತಾ?

Mon Nov 1 , 2021
ವಿಶ್ವಕಪ್​ನಿಂದ ಹೊರಬೀಳುತ್ತಾ ಭಾರತ? ಟಿ20 ವಿಶ್ವಕಪ್​ನಲ್ಲಿ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರೂ ಮಂಡಿಯೂರಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಅಲ್ಪ ಮೊತ್ತ ಗಳಿಸಿದಾಗಲೇ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ   ಅವರು ಭವಿಷ್ಯದ ನುಡಿಗಳನ್ನ ಹೇಳಿದ್ದಾರೆ. ಭಾರತ ತಂಡದ ಧೋರಣೆ ಹೀಗೇ ಮುಂದುವರಿದರೆ ಟಿ20 ವಿಶ್ವಕಪ್​ನಿಂದ ಹೊರಬೀಳಬಹುದು ಎಂದು ಎಚ್ಚರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ […]

Advertisement

Wordpress Social Share Plugin powered by Ultimatelysocial