ಅಜ್ಞಾತ ಸ್ಥಳದಲ್ಲಿರುವ ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಆರ್.ಡಿ ಪಾಟೀಲಗೆ, ನಾಳೆ ( ಜ 23) ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಫೈನಾನ್ಸಿಯಲ್ ಇಂಟಲಿಜನ್ಸ್ ಘಟಕದ ಡಿವೈಎಸ್ಪಿ ಪ್ರಕಾಶ ರಾಠೋಡ ಅವರು ನೋಟಿಸ್ ಜಾರಿಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಜ.19 ರಂದು ದಾಳಿ ಮಾಡಿದ ಸಂದರ್ಭದಲ್ಲಿ ಆರ್ ಡಿ ಪಾಟೀಲ ಮನೆಯಿಂದಪರಾರಿಯಾಗಿದ್ದ.ಅಜ್ಞಾತ ಸ್ಥಳದಿಂದ ಶನಿವಾರ ವಿಡಿಯೋ ಸಂದೇಶ ಕಳಿಸಿದ್ದ ಆರ್ ಡಿ ಪಾಟೀಲ “ನಾನು ಎಲ್ಲಿಯೋ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಈ ನೆಲದ ಕಾನೂನನ್ನು ಗೌರವಿಸುತ್ತೇನೆ” ಎಂದು ಹೇಳಿದ್ದ.ಈ ಹಿನ್ನೆಲೆಯಲ್ಲಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
https://play.google.com/store/apps/details?id=com.speed.newskannada