ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಈಡಿಗ ಸಮುದಾಯದ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಪರಮಾನಂದ ಮಹಾಸ್ವಾಮಿಗಳು ಹಾವೇರಿ ಇವರು ದಿ।ಬಂಗಾರಪ್ಪನವರು ಈಡಿಗ ಸಮುದಾಯದಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಇದ್ದು 1996 ರಲ್ಲಿ ಈಡಿಗ ಸಮುದಾಯ ದಾ 16 ಶಾಸಕರು ಹಾಗೂ 4 ಜನ ಸಂಸದರು ಪೈಕಿ
ಈಗ ಬೆರಳೆಣಿಕೆಯಷ್ಟು ಶಾಸಕರಿದ್ದು ಈಡಿಗ ಸಮುದಾಯವನ್ನು ರಾಜಕೀಯವಾಗಿ ತುಳಿಯುತ್ತಿರುವ ಪಕ್ಷಗಳಿಗೆ ನನ್ನ ನೇರ ಪ್ರಶ್ನೆ ಎಂದು ಮುಂದಿನ ದಿನದಲ್ಲಿ ನಮ್ಮ ಆರ್ಥಿಕ ಹೊರೆ ಹೆಚ್ಚಾಗಿದ್ದು ಕೆಲಸ ಕಾರ್ಯಗಳಿಲ್ಲದೆ ನಮ್ಮ ಜನಾಂಗದವರು ಅಲೆದಾಡುತ್ತಿರುವುದು ಮನಗಂಡು ನಾನು ಕರ್ನಾಟಕದಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಸುತ್ತುತ್ತಾ ನಮ್ಮ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡುತ್ತಾ ಬಂದಿದ್ದು ಇಂದು ಸಿರುವಾರ ತಾಲ್ಲೂಕಿಗೆ ನೂತನ ಘಟಕ ಉದ್ಘಾಟನೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಬಾರದಿದ್ದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: