‘ಅಣ್ಣಾತೆ’ ಸಿನಿಮಾದ ಹಾಡು ಇಂದು ಬಿಡುಗಡೆ ಆಗಿದ್ದು, ಇದು ಎಸ್ಪಿಬಿ ರಜನಿಕಾಂತ್ಗೆ ಹಾಡಿರುವ ಕೊನೆಯ ಹಾಡಾಗಿದೆ. ರಜನಿಕಾಂತ್ಗಾಗಿ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಇಂದು ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಆದ ಬಗ್ಗೆ ಭಾವುಕವಾಗಿ ಟ್ವೀಟ್ ಮಾಡಿರುವ ರಜನಿಕಾಂತ್, ”ಕಳೆದ 45 ವರ್ಷಗಳಿಂದ ಎಸ್ಪಿ ಬಾಲಸುಬ್ರಹ್ಮಣ್ಯಂ ಧ್ವನಿ ನನ್ನ ಪಾತ್ರಗಳಿಗೆ ಜೀವ ತುಂಬಿದೆ. ನನ್ನ ‘ಅಣ್ಣಾತೆ’ ಸಿನಿಮಾಕ್ಕಾಗಿ ಎಸ್ಪಿಬಿ ಹಾಡುವ ಹಾಡು ಅವರ ಜೀವನದ ಕೊನೆಯ ಹಾಡಾಗುತ್ತದೆ ಎಂದು ನಾನು ಕನಸು-ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ನನ್ನ ಪ್ರೀತಿಯ ಎಸ್ಪಿಬಿ ಅವರ ಧ್ವನಿಯ ಮೂಲಕ ಜೀವಂತ ಇರಲಿದ್ದಾರೆ” ಎಂದಿದ್ದಾರೆ ರಜನಿಕಾಂತ್.
ಎಲ್ಲಕ್ಕಿಂತಲೂ ದೊಡ್ಡ ನಷ್ಟವೆಂದರೆ ಸಿನಿಮಾಕ್ಕಾಗಿ ಹಾಡು ರೆಕಾರ್ಡ್ ಮಾಡಿದ ಕೆಲವು ದಿನಗಳ ನಂತರ ಎಸ್ಪಿಬಿಗೆ ಕೊರೊನಾ ಪಾಸಿಟಿವ್ ಆಯ್ತು, ಕೆಲವು ದಿನಗಳಲ್ಲಿ ಆಸ್ಪತ್ರೆ ಸೇರಿದ ಎಸ್ಪಿಬಿ ಶಾಶ್ವತವಾಗಿ ನಿರ್ಗಮಿಸಿದರು.