ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!

 

ನವದೆಹಲಿ: ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆರ್‌ಸಿಬಿ ತಂಡದ ಗೆಲುವಿನ ರೂವಾರಿ ಎನಿಸಿದವರು ಮಧ್ಯಪ್ರದೇಶದ 28 ವರ್ಷದ ಬ್ಯಾಟರ್ ರಜತ್ ಪಾಟಿದಾರ್. ಅವರಿಗೆ ಅಚಾನಕ್ ಆಗಿ ಐಪಿಎಲ್‌ನಲ್ಲಿ ಆಡುವ ಅವಕಾಶ ಒಲಿದು ಬಾರದಿದ್ದರೆ ಇಷ್ಟೊತ್ತಿಗೆ ಅವರು ಆರ್‌ಸಿಬಿ ಪರ ಆಡುತ್ತಿರಲಿಲ್ಲ, ಹನಿಮೂನ್‌ನಲ್ಲಿರುತ್ತಿದ್ದರು!

ಹೌದು, ಕಳೆದ ಮೇ 9ರಂದು ರಜತ್ ಪಾಟಿದಾರ್ ವಿವಾಹ ನಿಗದಿಯಾಗಿತ್ತು. ಇಂದೋರ್‌ನಲ್ಲಿ ಹೋಟೆಲ್ ಕೂಡ ಬುಕ್ ಮಾಡಲಾಗಿತ್ತು. ಆದರೆ, ಆರ್‌ಸಿಬಿ ತಂಡದ ಆಟಗಾರ ಲವ್ನಿತ್ ಸಿಸೋಡಿಯಾ ಗಾಯಗೊಂಡಾಗ ಪಾಟಿದಾರ್‌ಗೆ ದಿಢೀರನೆ ಐಪಿಎಲ್‌ನಲ್ಲಿ ಆಡುವ ಅವಕಾಶ ಒಲಿದುಬಂದಿತ್ತು. ಇದರಿಂದಾಗಿ ಅವರ ಮದುವೆಯನ್ನು ಮುಂದೂಡಲಾಗಿತ್ತು. ಸರಳವಾಗಿ ವಿವಾಹ ನಡೆಸಲು ಬಯಸಿದ್ದರಿಂದ ಆಮಂತ್ರಣ ಪತ್ರಿಕೆ ಮುದ್ರಿಸಿರಲಿಲ್ಲ ಎಂದು ತಂದೆ ಮನೋಹರ್ ಪಾಟಿದಾರ್ ತಿಳಿಸಿದ್ದಾರೆ.

ಕಳೆದ ಮೆಗಾ ಹರಾಜಿನಲ್ಲಿ ಅವರು 20 ಲಕ್ಷ ರೂ. ಮೂಲಬೆಲೆಯೊಂದಿಗೆ ಪಾಲ್ಗೊಂಡಿದ್ದರೂ, ಯಾವುದೇ ತಂಡ ಅವರನ್ನು ಕೊಂಡುಕೊಳ್ಳಲು ಮುಂದೆ ಬಂದಿರಲಿಲ್ಲ. ಐಪಿಎಲ್ ಬೆನ್ನಲ್ಲೇ ರಣಜಿ ಟ್ರೋಫಿ ನಾಕೌಟ್‌ನಲ್ಲಿ ಮಧ್ಯಪ್ರದೇಶ ಪರ ಆಡಲಿರುವ ಪಾಟಿದಾರ್, ನಂತರವಷ್ಟೇ ವಿವಾಹವಾಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡ್ರಗ್ಸ್​​ ಪ್ರಕರಣದಲ್ಲಿ ಶಾರೂಕ್​ ಪುತ್ರನಿಗೆ ಕ್ಲೀನ್​ ಚೀಟ್​!

Fri May 27 , 2022
  ಮುಂಬೈ: ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​​ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರ್ಯನ್​ ಖಾನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ ಚೀಟ್​​ ನೀಡಿದ್ದಾರೆ. ಕಳೆದ ಅಕ್ಟೋಬರ್​ 30 ರಂದು ಹಡಗಿನಲ್ಲಿ ಪಾರ್ಟಿಯೊಂದರಲ್ಲಿ ಆರ್ಯನ್​ ಖಾನ್​​ನನ್ನು ಬಂಧಿಸಲಾಗಿತ್ತು. ಆರ್ಯನ್​ ಬಳಿ ಡ್ರಗ್ಸ್​​​ ಇದೆ ಎಂದು ಅಂದು ಬಂಧಿಸಿದ ಅಧಿಕಾರಿಗಳು ಸಾಕ್ಷ್ಯ ಸಮೇತವೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಈ ಸಂಬಂಧ […]

Advertisement

Wordpress Social Share Plugin powered by Ultimatelysocial