ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ನೇರವೆರಿದ ಕಾರ್ಯಕ್ರಮ.ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಸಹಯೋಗದಲ್ಲಿ ಲಿಂಗತ್ವಧಾರಿತ ದೌರ್ಜನ್ಯವನ್ನು ನಿವಾರಣೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ತಾಲೂಕ ಪಂಚಾಯತ ಕಾರ್ಯನಿರ್ವಹಕಾಧಿಕಾರಿ ಪ್ರವೀಣಕುಮಾರ ಸಾಲಿ ಉದ್ಘಾಟಸಿ ಚಾಲನೆ.ಮಾತನಾಡಿದ ಅವರು (ಇಓ ಪ್ರವೀಣಕುಮಾರ ):ಮಹಿಳೆಯರಿಗಾಗಿ 112 ಹಾಗೂ ಸೈಬರ್ ಸ್ಕಲ್ ಎಂಬ ಸಹಾಯವಾಣಿಯನ್ನು ಮಾಡಿದ್ದು ಯಾವುದೇ ಮಹಿಳೆಯರಿಗೆ ದೌರ್ಜನ್ಯವಾದಾಗ ಆ ಸಹಾಯವಾಣಿಯ ಸದುಪಯೋಗ ಪಡೆದುಕೊಂಡು ತಮಗಾದ ನೋವು ದೌರ್ಜನ್ಯ ಕುರಿತು ಹೇಳಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.ಪ್ರತಿಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಯಾರಿಂದಾನೋ ದೌರ್ಜನ್ಯವಾದಾಗ ಕಾನೂನು ನೆರವು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಕುಂಬಾರ ಹಿರಿಯ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿಕ್ಕಮಠ ಹಿರಿಯ ಅಂಗನವಾಡಿ ಮೇಲ್ವಿಚಾರಕಿ ವೈಶಾಲಿ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: play.google.com/store/apps/det