ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದಿರುವ ವಿಚಾರ.
ರಮೇಶ್ ಜಾರಕಿಹೊಳಿ ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ.
ನಾವು 101% ಬಿಜೆಪಿಯಲ್ಲೇ ಇರ್ತೇವೆ, ಬಿಜೆಪಿ ಬಿಡಲ್ಲ
ಸ್ಥಾನಮಾನ ಸಿಗೋದು ಬಿಡೋದು ಬೇರೆ ವಿಚಾರ
ನಾವಿಲ್ಲಿಗೆ ಸ್ಥಾನಮಾನ ಅಪೇಕ್ಷಿಸಿ ಬರಲಿಲ್ಲ
ಸಾಂದರ್ಭಿಕ ರಾಜಕೀಯದ ಪರಿಸ್ಥಿತಿಯಿಂದ ಬಿಜೆಪಿಗೆ ಬಂದಿದ್ದು ಎಲ್ರಿಗೂ ಗೊತ್ತಿದೆ
ಬಿಜೆಪಿಗೆ ಬಂದ ಮೇಲೆ ಪಕ್ಷದ ಕೆಲಸವನ್ನು ಮಾಡ್ತಿದ್ದೇವೆ
ಅಧಿಕಾರ ಬಯಸಿ ನಾವು ಬಿಜೆಪಿಗೆ ಬರಲಿಲ್ಲ
ರಮೇಶ್ ಜಾರಕಿಹೊಳಿ ಒಬ್ಬ ವ್ಯಕ್ತಿ ಅಲ್ಲ, ಅವರೊಬ್ಬ ಶಕ್ತಿ
ರಮೇಶ್ ಜಾರಕಿಹೊಳಿ ಅವರ ಮೇಲೆ ಬಿಜೆಪಿ ವರಿಷ್ಠರು ಅಪಾರ ವಿಶ್ವಾಸ ಇಟ್ಟಿದ್ದಾರೆ
ರಮೇಶ್ ಜಾರಕಿಹೊಳಿ ಅವರು 2023 ರಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ
ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಡ್ತಾರೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ
ಅದು ಸುಳ್ಳು, ಅವರು ಪಕ್ಷ ಬಿಡಲ್ಲ
ನಾವಾಗಲೀ, ಜಾರಕಿಹೊಳಿ ಅವರಾಗಲೀ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು, ಬೆಳಗಾವಿಯಲ್ಲಿ ಹೆಚ್ಚಿನ ಸೀಟು ಗೆಲ್ಲಿಸಲು ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: