ಪ್ರತಿಷ್ಠೆಗಾಗಿ ಹೋರಾಟದ ದೊಂಬರಾಟ..! ಸಚಿವ ಆರ್. ಅಶೋಕ್ ವಾಗ್ದಾಳಿ

ಕೋಡಿಹಳ್ಳಿ ಚಂದ್ರಶೇಖರ್ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲ ಮುಖಂಡರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಇನ್ನು ಹಲವರು ಮುಷ್ಕರ ಮುಂದುವರೆಸಿದ್ದಾರೆ. ರಾಜ್ಯದ ಜನರು ಈ ದೊಂಬರಾಟವನ್ನು ಗಮನಿಸುತ್ತಿದ್ದಾರೆ ಇಲಾಖೆಗೆ ಸಂಬಂಧಿಸದ ವ್ಯಕ್ತಿಯೊಬ್ಬ ಸ್ವಪ್ರತಿಷ್ಠೆಗಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇದರ ಹಿಂದಿನ ಕೈವಾಡದ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು, ಕಾರ್ಮಿಕರು, ಸಾರ್ವಜನಿಕರು ಪರದಾಡುತ್ತಿದ್ದಾರೆ ಆದಾಗ್ಯೂ ಪ್ರತಿಷ್ಠೆಗಾಗಿ ಮುಷ್ಕರ ನಡೆಸುತ್ತಿರುವುದು ಖಂಡನೀಯ. ಸಾರಿಗೆ ನೌಕರರ 9 ಬೇಡಿಕೆ ಈಡೇರಿಸುವುದಾಗಿ ನಿನ್ನೆಯೇ ಸರ್ಕಾರ ಮಾಧ್ಯಮಗಳ ಮೂಲಕ ಘೋಷಿಸಿದೆ. ಸರ್ಕಾರ ಹಾಗೂ ಸಚಿವರ ಬಗ್ಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಮಾಧ್ಯಮದ ಮೂಲಕವೇ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಅದನ್ನಾದರೂ ನಂಬಿ ಎಂದು ಹೇಳಿದರು.

 

ಇದನ್ನೂ ಓದಿ :ಮದುವೆಯಾಗುವ ನವ ಜೋಡಿಯ ದಂಪತಿಗಳಿಗೆ ಸಿಹಿ ಸುದ್ದಿ…

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಮಮ್ಮಿಯಾದ ಕರೀನಾ

Mon Dec 14 , 2020
ಖಾನ್ ಕುಟುಂಬದ ಬಹೂ, ನಟಿ ಕರೀನಾ ಕಪೂರ್ ತಮ್ಮ ಅಭಿಮಾನಿಗಳಿಗೆ ಮತ್ತೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.. ಈಗಾಗ್ಲೇ ತೈಮೂರ್ ಅಲಿ ಖಾನ್ ಅನ್ನೋ ಮುದ್ದಾದ ಗಂಡು ಮಗುವಿನ ತಾಯಿಯಾಗಿರುವ ಕರೀನಾ, ಇದೀಗ ಮತ್ತೆ ಗರ್ಭವತಿಯಾಗಿದ್ದಾರೆ.. ಈ ಸಿಹಿ ಸುದ್ದಿಯನ್ನ ಸ್ವತಃ ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಪ್ಯೂಮಾ ಬ್ರ್ಯಾಂಡ್ ಪ್ರೊಮೋಶನ್ ಸಮಯದಲ್ಲಿ ತೆಗೆದುಕೊಂಡಿರುವ ಎರಡು ಫೋಟೋಗಳನ್ನ ಪೋಸ್ಟ್ ಮಾಡಿರುವ ಕರೀನಾ, ಆ ಫೋಟೋಗಳ ಜೊತೆಗೆ ಟೂ ಆಫ್ ಅಸ್ […]

Advertisement

Wordpress Social Share Plugin powered by Ultimatelysocial