ಕುಂಬಾರರ ಚುನಾವಣೆಯಲ್ಲಿ ಅಧಿಕಾರಿಗಳೇ ಅಕ್ರಮ ಮತಚಲಾವಣೆ!

ಆಂಕರ್: ಇತ್ತೀಚೆಗೆ ನಡೆದ ಕುಂಬಾರರ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳೇ ಶಾಮೀಲಾಗಿ ಅಕ್ರಮ ಮತಚಲಾವಣೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಚ್ 27ರಂದು ಕುಂಬಾರರ ಸಂಘ ಕಲಾಸಿಪಾಳ್ಯ, ಈ ಸಂಘದ ಆಡಳಿತ ಮಂಡಳಿಗಾಗಿ ಚುನಾವಣಾ‌ ಮತದಾನ ನಡೆದಿರುತ್ತದೆ. ಈ ವೇಳೆ ಸರ್ಕಾರವೇ ನೇಮಿಸಿದ್ದ ಚುನಾವಣಾಧಿಕಾರಿ ಮಂಜುನಾಥ್ ಎಂ.ಪಿ ಸೇರಿದಂತೆ 120 ಮಂದಿ ಮತದಾನದಲ್ಲಿ ಅಕ್ರಮ‌ ನಡೆಸಿದ್ದಲ್ಲದೇ ಅವರೇ ಮತದಾರಾಗಿ ಸಾವಿರಾರು ಮತಗಳನ್ನ ಚಲಾವಣೆ ಮಾಡಿದ್ದಾರೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂಘದ ಹಾಲಿ ಸದಸ್ಯರುಗಳು ಸುದ್ದಿಗೋಷ್ಠಿ ನಡೆಸಿ ದಾಖಲೆ, ಸಿಸಿಟಿವಿ ವೀಡಿಯೋ ಸಮೇತ ಅಕ್ರಮವನ್ನ ಬಯಲು ಮಾಡಿದ್ದಾರೆ. ಅಲ್ಲದೆ ಅಕ್ರಮ ನಡೆಸಿ ಅಧಿಕಾರಿಗಳ ವಿರುದ್ದ ಕ್ರಮಿನಲ್ ಮೊಕದ್ದಮೆ ಹೂಡಬೇಕು. ಯಾಕಂದ್ರೆ ಕುಂಬಾರರ ಸಂಘದಲ್ಲಿ 700ಕೋಟಿಗೂ ಅದಿಕವಾದ ಹಣವಿದೆ. ಈ ಹಣವನ್ನ ದುರುಪಯೋಗ ಪಡಿಸಿಕೊಳ್ಳಲು ಸಂಚು ರೂಪಿಸಿದ್ದು, ಚುನಾವಣೆಗೆ ಸ್ಪರ್ದಿಸಿದ್ದ ಕೆಲವರೊಂದಿಗೆ ಕೈ ಜೋಡಿಸಿ ಅವರ ಪರವಾಗಿ ಅಕ್ರಮ ಮತಚಲಾವಣೆ ಮಾಡಲಾಗಿದೆ ಎಂದು ಮಾಜಿಸಿ ಸದಸ್ಯ‌ ನಾಗೇಶ್ ಎಂಬುವವರು ಆರೋಪಿಸಿದ್ರು. ಅಲ್ಲದೇ ಅಕ್ರಮ ನಡೆಸಿರುವ ಅಧಿಕಾರಿ ಮಂಜುನಾಥ್ ಎಂಪಿಯವರನ್ನ ಕೂಡಲೇ ಕೆಲಸದಿಂದ ವಜಾಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಕ್ರಮ‌ವೆಸಗದಿವರ ವಿರುದ್ಧ ದೊಡ್ಡ ಮಟ್ಟದ ಮುಷ್ಕರ ಮಾಡೋದಾಗಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸೀನಿಯರ್ ಜಿಯಾಗ್ರಫಿ ಪ್ರೊಫೆಸರ್ ಅರೆಸ್ಟ್!

Wed Apr 27 , 2022
ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ ಧಾರವಾಡ ಕರ್ನಾಟಕ ಯೂನಿವರ್ಸಿಟಿ ವ್ಯಾಲ್ಯುಯೇಷನ್ ರಿಜಿಸ್ಟ್ರಾರ್ ಪ್ರೊ, ನಾಗರಾಜ್ ವಿಚಾರಣೆ ನೋಟಿಸ್ ನೀಡಿ ವಿಚಾರಣೆ ನಡೆಸ್ತಿರೊ ಮಲ್ಲೇಶ್ವರಂ ಪೊಲೀಸರು ಮೈಸೂರಲ್ಲಿ ಆರೋಪಿ ಸೌಮ್ಯಗೆ ಪಿಎಚ್ ಡಿ ಪ್ರೊಫೆಸರ್ ಆಗಿದ್ದ ನಾಗರಾಜ್ ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್ ಗೆ ಪ್ರಶ್ನೆ ಪತ್ರಿಕೆ ರೆಡಿ ಮಾಡುವಂತೆ ಕೆಇಎಯಿಂದ ನಾಗರಾಜ್ ಗೆ ಸೂಚನೆ ಬಂದಿತ್ತು ಪ್ರಶ್ನೆಪತ್ರಿಕೆ ರೆಡಿ ಮಾಡುವಂತೆ ಹೇಳಿದ್ರೆ ,ಶಿಷ್ಯೆಗೆ ಹೇಳಿರುವ ನಾಗರಾಜ್ ಶಿಷ್ಯೆ ಸೌಮ್ಯಗೆ ಕೆಲ ಪ್ರಶ್ನೆಗಳನ್ನ […]

Advertisement

Wordpress Social Share Plugin powered by Ultimatelysocial