“ನಾಯಿ ಮರಿ ಕೊಟ್ಟು ಹರಿಪ್ರಿಯಾರನ್ನು ಪಟಾಯಿಸಿಕೊಂಡಿಲ್ಲ.

ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ವೈವಾಹಿಕಿ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. 2023ರ ಮೊದಲ ತಿಂಗಳಲ್ಲಿ ಶುಭ ಕಾರ್ಯ ನಡೆಯಲಿದೆ. ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಡೇಟಿಂಗ್ ವಿಷಯ ಹೊರಬಿದ್ದಿತ್ತು.

ಬಳಿಕ ನಿಶ್ಚಿತಾರ್ಥದ ವಿಷಯ ಕೂಡ ರಿವೀಲ್ ಆಗಿತ್ತು. ನಂತ್ರ ಇಬ್ಬರು ಮದುವೆ ಆಗುತ್ತಿರೋ ಮ್ಯಾಟರ್ ಕೂಡ ಹೊರಬಿದ್ದಿತ್ತು. ಆದರೂ ಈ ಜೋಡಿ ಮಾತ್ರ ನೇರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಹೊಗಿರಲಿಲ್ಲ. ಇನ್ನೇನು ಮದುವೆ ದಿನಾಂಕ ಹತ್ತಿರ ಬರುತ್ತಿರುವಾಗಲೇ ಒಬ್ಬರೂ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಈ ವೇಳೆ ವಸಿಷ್ಠ ಸಿಂಹ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದೇಗೆ? ನಾಯಿ ಮರಿ ಕೊಟ್ಟು ಪಟಾಯಸಿದ್ರಾ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ವಸಿಷ್ಠ ಸಿಂಹ ಏನು ಹೇಳಿದ್ರು ಅನ್ನೋ ಝಲಕ್ ಇಲ್ಲಿದೆ. 2016ರಿಂದ ಹರಿಪ್ರಿಯಾ, ವಸಿಷ್ಠ ಸ್ನೇಹಿತರು “2016ರಿಂದ ಸ್ನೇಹ ನಮ್ಮದು. ಆಗಾಗ ಮಾತಾಡುತ್ತಿದ್ದೆವು. ಈ ಸ್ನೇಹ ಹುಟ್ಟೋಕೆ ಕಾರಣ, ನಾನು ಅವರ ಅಭಿಮಾನಿ. ಆಕ್ಟರ್ ಆಗಿ ನೋಡಿದರೆ, ಅವರು ನನಗಿಂತ ಸೀನಿಯರ್. ಅವರ ಕೆಲಸ ನನಗೆ ಬಹಳ ಇಷ್ಟ. ನನ್ನ ಗೋಧಿ ಬಣ್ಣ ಸಿನಿಮಾ ನೋಡಿ, ಇಷ್ಟ ಆಗಿ ಅವರಾಗಿಯೇ ಬಂದು ಮಾತಾಡಿದ್ದರು. ಸೀನಿಯರ್ ಆಗಿ ಬಂದು ವಿಶ್ ಮಾಡಿದ್ರಲ್ಲ. ಎಷ್ಟು ಒಳ್ಳೆ ಗುಣ ಅಂತ ಅಂದ್ಕೊಂಡಿದ್ದೆ. ಈಕೆ ನಿಜವಾಗಲೂ ನನ್ನ ಇಷ್ಟದ ನಟಿ. ನಾನು ನೋಡಿರುವ ಸಿನಿಮಾಗಳದ್ದು ಲಿಸ್ಟ್ ಬೇಕಾದರೂ ಕೊಡುತ್ತೇನೆ. ಆನಂತರ ಸ್ನೇಹ, ಸ್ನೇಹ ಪ್ರೀತಿಯಾಗಿ ಹೇಗೆ ಹೇಳೋದು ಅಂತ ಪರದಾಡುತ್ತಿದ್ದೆವು. ನಂತ್ರ ಆ ಒಂದು ದಿನ ಬಂತು.” ಎನ್ನುತ್ತಾರೆ ವಸಿಷ್ಠ ಸಿಂಹ. ‘ನಾಯಿ ಕೊಟ್ಟು ಪಟಾಯಿಸಿಕೊಂಡಿಲ್ಲ’

“ಮನೆಯವರು ಬರ್ತ್‌ಡೇಗೆ ಒಂದು ವಿಡಿಯೋ ಹಾಕಿದ್ದರು. ಆಡಿಯೋ ನೋಡಿ ಹಲವಾರು ಜನ ನಾಯಿಮರಿ ಕೊಟ್ಟು ಪಟಾಯಿಸಿಕೊಂಡೆ ಅಂದ್ರು. ಯಾವ ಬಾಳು ಗುರು ಇಷ್ಟೊಂದು ಕಷ್ಟಪಟ್ಟಿದ್ದೀನಿ. ನಾಯಿ ಮರಿ ಕೊಟ್ಟು ಪಟಾಯಿಸಿಕೊಂಡು ಬಿಟ್ಟ ಅಂದ್ರಲ್ಲ ಅಂತ ಅನಿಸಿತ್ತು. ಆ ಊಹೆ ಸಹಜ. ಯಾರು ಏನು ಬೇಕಾದ್ರೂ ಅಂದ್ಕೊಳ್ಳಬಹುದು. ಅಂದ್ಹಾಗೆ ಪ್ರೀತಿ ಆದ್ಮೇಲೆ ನಾಯಿಮರಿ ಕೊಟ್ಟೆ. ಆ ಸಮಯದಲ್ಲಿ ಇಬ್ಬರು ಪ್ರೀತಿಸುತ್ತಿದ್ದೆವು. ಪ್ರೀತಿಯಲ್ಲಿ ಇದ್ವಿ.” ಅಂತಾರೆ ವಸಿಷ್ಠ ಸಿಂಹ.

‘ನಾಯಿ ಮರಿ ಗಿಫ್ಟ್ ಮಾಡಿದ್ದೆ’ “ಅವರ ಮನೆಯಲ್ಲಿ ಲಕ್ಕಿ ಅಂತ ಒಂದು ನಾಯಿ ಮರಿ ಇತ್ತು. ಕ್ಯಾನ್ಸರ್ ಬಂದು ಹೋಗಿಬಿಡ್ತು. ಅವರು ದು:ಖದಲ್ಲಿ ಇದ್ದಿದ್ದನ್ನು ಹತ್ತಿರದಿಂದ ನೋಡುತ್ತಿದ್ದೆ. ಅವರಿಗೆ ನಾಯಿ ಮರಿ ಕಂಡರೆ ತುಂಬಾನೇ ಇಷ್ಟ. ಲಕ್ಕಿನ ಮರಿಬೇಕು ಅಂದ್ರೆ, ಇನ್ನೊಂದು ಏನೋ ಬಂದ್ರೆ ಸರಿ ಹೋಗುತ್ತೇನೋ ಅಂತ ನಾಯಿ ಮರಿ ಕ್ರಿಸ್ಟಲ್ ಅನ್ನು ಉಡುಗೊರೆಯಾಗಿ ಕೊಟ್ಟೆ. ಗಿಫ್ಟ್ ಕೊಟ್ಟಾಗ ಅದರ ಎದೆಮೇಲೆ ಹಾರ್ಟ್ ಶೇಪ್ ಇದೆ ಅಂತ ಗೊತ್ತಿರಲಿಲ್ಲ. ಇನ್ನೊಂದು ಮರಿ ಹ್ಯಾಪಿ ಅಂತಿದೆ. ಅದರದ್ದೂ ಇದರದ್ದೂ ಡಿಸೆಂಬರ್ 6 ಒಂದೇ ದಿನ ಬರ್ತ್‌ಡೇ. ಆಗ ಪ್ರೀತಿಗೆ ಕನ್ನಡಿ ಅಂತ ಹೇಳಿದ್ರು. ಆಗ ಅನಾರ್ಥವಾಗಿ ಅಪಾರ್ಥವಾಗಿ ಏನೇನೋ ಆಗಿತ್ತು.” ವಸಿಷ್ಠ ಸಿಂಹ ಹೇಳಿದ್ದಾರೆ.

‘ನನ್ನ ತಾಯಿ ಜಾಗಕ್ಕೆ ಇನ್ನೊಬ್ಬರು ಬಂದಿದ್ದಾರೆ'”ನಾವು ಮದುವೆ ಆಗುತ್ತಿರೋದು ಗಣಪತಿ ಸಚ್ಚಿದಾನಂದ ಆಶ್ರಮ. ನನ್ನ ಊರು ಮೈಸೂರು. ನನಗೆ ಮೈಸೂರು ಅಂದ್ರೆ, ಒಲವು, ಪ್ರೀತಿ. ನಾನು ಬೆಳೆದಿದ್ದ ಊರು ಮೈಸೂರು. ಅಲ್ಲೇ ಮದುವೆ ಆಗಬೇಕು ಅಂತ ಅಂದ್ಕೊಂಡಿದ್ದೆ. ಎದುರುಗಡೆ ಚಾಮುಂಡಿ ತಾಯಿ ಬೆಟ್ಟ ಕಾಣಿಸುತ್ತೆ. ನನ್ನ ತಾಯಿ ಹೋದಾಗ ಚಾಮುಂಡಿತಾಯಿ ನೋಡುತ್ತಿದ್ದೆ. ಆ ಜಾಗಕ್ಕೆ ಇನ್ನೊಬ್ಬರು ಬಂದಿದ್ದಾರೆ. ನಾನು ಒಂಟಿಯಾಗಿ ಕೊರುಗುತ್ತಿದ್ದಾಗ, ಜೊತೆಯಾಗಿ ಇದ್ದವರು ಇವರು. ಈಗ ಮಡದಿಯಾಗಿ ಸ್ವೀಕರಿಸುತ್ತಿದ್ದೀನಿ.” ಎಂದು ವಸಿಷ್ಠ ಸಿಂಹ ವಿಷಯ ಹಂಚಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿಗೆ ಅಭಿಮಾನಿಯಿಂದ ವಿಶೇಷ ಸ್ವಾಗತ.

Thu Jan 12 , 2023
ಪ್ರಧಾನಿ ಮೋದಿಗೆ ಅಭಿಮಾನಿಯಿಂದ ವಿಶೇಷ ಸ್ವಾಗತ. ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ರಂಗೋಲಿಯಲ್ಲಿ ಅರಳಿದ ಮೋದಿ. ದಿನೇಶ್ ಚಿಲ್ಲಾಳ ಎಂಬ ಕಲಾವಿದನ ಕೈಚಳಕದಿಂದ ರಂಗೋಲಿಯಲ್ಲಿ ನಮೋ ಭಾವಚಿತ್ರ ಅನಾವರಣ. ವೇದಿಕೆಯ ಮುಂಭಾಗದಲ್ಲಿಯೇ ಮೋದಿ ಚಿತ್ರ ಬಿಡಿಸಿದ ಕಲಾವಿದ. 75 ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿಯವರು ಧರಿಸಿದ್ದ ಪೋಷಾಕಿನ ಚಿತ್ರ ರಂಗೋಲಿಯಲ್ಲಿ ಅರಳಿಸಿದ ಕಲಾವಿದ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial