ಸಂಕಷ್ಟಗಳ ಸರದಾರ ”ಸಲಗ”-ಪೊಲೀಸ್ ಠಾಣೆ ಮೆಟ್ಟಿಲೇರಿದ ದುನಿಯಾ ವಿಜಿ..!

ವಾರ್ಡ್‌ ಯಾವುದೇ ಕಲರ್‌ ಅಲ್ಲಿ ಇದ್ರು ಈ ಅಂಡರ್‌ ವರ್ಡ್‌ ಮಾತ್ರ ಕೆಂಪು ಕಲರ್‌ ಅಲ್ಲಿರುತ್ತೆ.ಯಾವುದೊ ಕ್ರೈಮ್‌ ಬಗ್ಗೆ ಹೇಳ್ತಿಲ್ಲ ರೀ ಇದು ಪಕ್ಕಾ ಚಿತ್‌ ಮಾಡಿ ಚಟ್ಟದ ಮೇಲೆ ಮಲಗಿಸೋ ರಾ ಮೂವಿ. ಒಂಟಿಯಾಗಿ ನುಗ್ಗಿ ಥಿಯೇಟರ್‌ ನಾ ಉಡಿಸ್‌ ಮಾಡಿರೋ ಉಡ ಈ ಸಲಗ ,ಎಸ್‌ ಕಾಲ ಬಾಳ ಕರಾಬು ,ಮಜಾ ಮಾಡಿ ಲಡೈಸುತಿರೋ ಸಲಗಾಗೆ ಸಂಕಷ್ಟ ಶುರುವಾಗಿದೆ. ಅಕ್ಟೋಬರ್ 14 ರಂದು ಬಿಡುಗಡೆ ಆಗಿದ್ದ  ಈ ಚಿತ್ರಕ್ಕೆ ಒಂದರಮೇಲೊಂದು ಸಂಕಷ್ಟಗಳು ಎದುರಾಗುತ್ತಲೇ ಇದೆ. ಕೊರೊನಾ ಸೇರಿದಂತೆ ಹಲವು ಅಡೆ-ತಡೆಗಳನ್ನು ದಾಟಿ ಮಾಸ್‌ ಆಗಿ ರಿಲೀಸ್‌ ಆದ ‘ಸಲಗ’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಇದೀಗ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಸಿನಿಮಾ ಗೆದ್ದೇಬಿಟ್ಟಿತು ಎಂದುಕೊಳ್ಳುವಾಗಲೇ  ಸಂಕಷ್ಟವೊಂದು ಎದುರಾಗಿದೆ.

‘ರಿಯಲ್ ಎಸ್ಟೇಟ್’ ಹೆಸರಿನ ಹೊಸಬರ ಸಿನಿಮಾವೊಂದು ಬಿಡುಗಡೆ ಆಗುತ್ತಿದೆ. ಸಿನಿಮಾವು ತ್ರಿವೇಣಿ ಚಿತ್ರಮಂದಿರವನ್ನು ಮುಖ್ಯ ಚಿತ್ರಮಂದಿರವಾಗಿ ಬುಕ್ ಮಾಡಿಕೊಂಡಿದೆ. ಪ್ರಸ್ತುತ ‘ಸಲಗ’ ಅದೇ ಚಿತ್ರಮಂದಿರದಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ‘ಸಲಗ’ ಸಿನಿಮಾವನ್ನು ಹಿಂದೆ ತೆಗೆಯುವುದು ವಿಜಯ್‌ಗೆ ಇಷ್ಟವಿಲ್ಲ.ಇದಕ್ಕೆ ವಿರೋಧ ವ್ಯಕ್ತಪಡಿಸಿದ ‘ರಿಯಲ್ ಎಸ್ಟೇಟ್’ ಸಿನಿಮಾದ ನಿರ್ಮಾಪಕ ರಾಮಕೃಷ್ಣ, ದುನಿಯಾ ವಿಜಯ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆದರೆ ದುನಿಯಾ ವಿಜಯ್ ಹಾಗೂ ರಾಮಕೃಷ್ಣ ಪರಸ್ಪರ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ‘ರಿಯಲ್ ಎಸ್ಟೇಟ್’ ಸಿನಿಮಾವನ್ನು ಅನುಪಮ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವಂತೆ ವಿಜಯ್ ರಾಮಕೃಷ್ಣರ ಮನವೊಲಿಸಿದ್ದಾರೆ. ‘ಸಲಗ’ ಸಿನಿಮಾ ಇನ್ನೊಂದು ವಾರ ತ್ರಿವೇಣಿ ಚಿತ್ರಮಂದಿರದಲ್ಲಿಯೇ ಧೂಳ್‌ ಎಬ್ಬಿಸಲಿದೆ.

ಏಯ್‌ ನಾನ್‌ ಹೊಡಿಬೇಕು ಅಂತ ಡಿಸೈಡ್‌ ಮಾಡುದ್ರೆ  ಸೈನ್ಯಾ ಎಷ್ಟೇ ದೊಡ್ಡದಾಗಿ ಇರಲಿ ನುಗ್ಗಿ ಒಬ್ಬನೇ ಓಡಿತೀನಿ.ಈ ರೀತಿ ಮಾಸ್‌ ಆಗಿ ಪಂಚ್‌ ಹೇಳೋದು ಗೊತ್ತು , ಸಮಸ್ಯೆ ಬಂದಾಗ ಅಣ್ಣ ಅಕ್ಕ ಅಂತ ಕಾಲು ಹಿಡಿದೆ ಗತ್ತಲ್ಲಿ ಐಸ್‌ ಇಡೋದು ಗೊತ್ತು ಈ ವಿಜಿಗೆ. ಹೌದು ಇರೋ ಸಮಸ್ಯೆನಾ ನಾಜುಕಾಗಿ ಮನಸ್ಸಿಗೆ ನಾಟದಂಗೆ ಡೀಲ್‌ ಮಾಡಿದೆ ಸಲಗ ಚಿತ್ರತಂಡ.ಎಸ್ ವೀಕ್ಷಕರೇ ,ಮಾತುಕತೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ದುನಿಯಾ ವಿಜಯ್, ”ಹೇಗಾದರು ಮಾಡಿ ‘ಸಲಗ’ ಸಿನಿಮಾವನ್ನು ತುಳಿಯಬೇಕು ಎಂದು ಕೆಲವರು ‘ರಿಯಲ್ ಎಸ್ಟೇಟ್’ ಸಿನಿಮಾದ ನಿರ್ಮಾಪಕ ರಾಮಕೃಷ್ಣ ಅವರನ್ನು ಆಯುಧವನ್ನಾಗಿ ಬಳಸಲು ಯತ್ನಿಸಿದ್ರು.ಆದರೆ ರಾಮಕೃಷ್ಣ ಹೋರಾಟಗಾರರು ಹಾಗಾಗಿ ನೇರವಾಗಿ ನಮ್ಮೆದುರು ಬಂದು ಮಾತನಾಡಿದ್ರು. ಈಗ ನಾವುಗಳು ಪರಸ್ಪರ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ” .”ಸಲಗ’ ಸಿನಿಮಾವನ್ನು ತುಳಿಯುವ ಪ್ರಯತ್ನ ಕೈಬಿಡಿ, ಇಲ್ಲದಿದ್ದರೆ ನೀವೆ ಸಣ್ಣವರಾಗುತ್ತೀರ. ಏನೇ ಮಾಡಿದ್ರು ಸಲಗ ಸಿನಿಮಾನಾ ನಿಲ್ಲಿಸೋಕೆ ಆಗೋದಿಲ್ಲ. ‘ಸಲಗ’ ಹೋದದ್ದೇ ದಾರಿ. ಅದನ್ನು ಜನ ಹೆಗಲ ಮೇಲೆ ಎತ್ತಿಕೊಂಡಿದ್ದಾಗಿದೆ” ಎಂದು ದುನಿಯಾ ವಿಜಯ್ ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ನ.3ರಿಂದ ಯಶವಂತಪುರ-ಚಂಡಿಗಢಕ್ಕೆ ರೈಲು ಸಂಚಾರ ಆರಂಭ......!!!!

Sat Oct 23 , 2021
ನೈಋತ್ಯ ರೈಲ್ವೆ ವಲಯವು ಯಶವಂತಪುರ-ಚಂಡಿಗಢ ನಿಲ್ದಾಣಗಳ ಮಧ್ಯೆ ವಾರದಲ್ಲಿ 2 ದಿನ ಸಂಚರಿಸುವ ದ್ವಿ ಸಾಪ್ತಾಹಿಕ ಸೂಪರ್​ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್​ ರೈಲು ಸೇವೆ ಪ್ರಾರಂಭಿಸಿದೆ. ಯಶವಂತಪುರದಿಂದ ನೈಋತ್ಯ ರೈಲ್ವೆ ವಲಯವು ಯಶವಂತಪುರ-ಚಂಡಿಗಢ ನಿಲ್ದಾಣಗಳ ಮಧ್ಯೆ ವಾರದಲ್ಲಿ 2 ದಿನ ಸಂಚರಿಸುವ ದ್ವಿ ಸಾಪ್ತಾಹಿಕ ಸೂಪರ್​ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್​ ರೈಲು ಸೇವೆ ಪ್ರಾರಂಭಿಸಿದೆ. ಯಶವಂತಪುರದಿಂದ ನ.3ರಿಂದ ಪ್ರತಿ ಬುಧವಾರ ಮತ್ತು ಶನಿವಾರದಂದು ಮಧ್ಯರಾತ್ರಿ 1.55ಕ್ಕೆ ಹೊರಡುವ ರೈಲು, ಮಾರನೇ […]

Advertisement

Wordpress Social Share Plugin powered by Ultimatelysocial