BENGALURU:ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್‍ಗಾರ್ಡನ್ ಠಾಣೆ;

ಮಾರಾಟ ಮಾಡಲು ಯತ್ನಿಸುತ್ತಿದ್ದ 9 ಜಿಂಕೆ ಕೊಂಬುಗಳ ವಶ

ಬೆಂಗಳೂರು,ಜ.25-ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ವ್ಯಕ್ತಿ.

ಈತ ಶಾಂತಿನಗರದ ಬಸ್ ಡಿಪೋ ಸಮೀಪ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಿಂಹಪ್ಪನನ್ನು ಬಂಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಜಿಂಕೆ ಕೊಂಬುಗಳು ಎಲ್ಲಿ ಸಿಕ್ಕಿದವು, ಯಾರು ಮಾರಾಟಕ್ಕೆ ಕೊಟ್ಟರು, ಯಾವ ಕಾಡಿನಿಂದ ಕೊಂಬುಗಳನ್ನು ತರಲಾಗಿದೆ. ಯಾರಿಗೆ ಮಾರಾಟ ಮಾಡಲು ಬಂದ್ದನೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಗರೇಟು ಸೇದುವುದರಿ೦ದ ಬೊಜ್ಜು ಹೆಚ್ಚುತ್ತದೆ;

Tue Jan 25 , 2022
ಸಿಗರೇಟು ಸೇದುವುದು ಜೀವನಕ್ಕೆ ಹಾನಿಕಾರಕ. ಬೊಜ್ಜು ಹೆಚ್ಚುತ್ತದೆ. ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಹೊಸ ಸಮೀಕ್ಷೆಯೊಂದರ ಪ್ರಕಾರ ಈ ಸಮಸ್ಯೆ ಅವರಿಗೆ ಮಾತ್ರವಲ್ಲ, ಅವರ ಮುಂದಿನ ನಾಲ್ಕು ತಲೆಮಾರಿಗೂ ವಿಸ್ತರಣೆ ಆಗಲಿದೆ ಎಂಬ ಆಘಾತಕಾರಿ ವರದಿ ಬಹಿರಂಗಗೊಂಡಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಸಿಗರೇಟು ಸೇದುವುದರಿಂದ ಅವರ ಮಕ್ಕಲು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ನಾಲ್ಕು ತಲೆಮಾರಿನವರೆಗೆ ಬೊಜ್ಜು ಹೆಚ್ಚಳ ಕಂಡು ಬರುತ್ತದೆ. ಜನರಲ್ ಸೈಂಟಿಫಿಕ್ […]

Advertisement

Wordpress Social Share Plugin powered by Ultimatelysocial