ಅಗ್ನಿ ಸಾಕ್ಷಿ ಸೀರಿಯಲ್ಗೆ ಮತ್ತೊಂದು ಗರಿಮೆ -ರೀಮೇಕ್‌ ಆಯ್ತು ಅಗ್ನಿಸಾಕ್ಷಿ ಧಾರಾವಾಹಿ

ಕಲರ್ಸ್‌ ಕನ್ನಡ ಚಾನಲ್ನಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿ ಮನೆ ಮನೆ ಮಾತಾಗಿದ್ದ ಧಾರಾವಾಹಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಧಾರಾವಾಹಿ ಅಗ್ನಿಸಾಕ್ಷಿ. ಈ ಸೀರಿಯಲ್‌ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆದ್ದಿತ್ತು. 7 ವರ್ಷಗಳಲ್ಲಿ ಕೆಲವೊಂದು ಪಾತ್ರಧಾರಿಗಳನ್ನ ಬದಲಿಸಿದರಾದರೂ ಮತ್ತೆ ಬಂದ ಪಾತ್ರಧಾರಿಗಳನ್ನ ಜನ ಅಷ್ಟೇ ಪ್ರೀತಿಯಿಂದ ಮೆಚ್ಚಿಕೊಂಡ್ರು. ಮುಖ್ಯವಾಗಿ ಧಾರಾವಾಹಿಯಲ್ಲಿ ವಿಲನ್‌ಪಾತ್ರಧಾರಿಯಾಗಿದ್ದ ಚಂದ್ರಿಕಾ ಪಾತ್ರ ಬದಲಾದಾಗ ಅಗ್ನಿಸಾಕ್ಷಿ  ನೋಡೋರ ಸಂಖ್ಯೆ ಇನ್ನು ಕಡಿಮೆ ಆಗಬಹುದು ಎಂದು ಅಂದುಕೊಂಡಿದ್ದವರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿ ಸೀರಿಯಲ್‌ ಮುನ್ನುಗ್ಗಿತ್ತು. ಟಿಆರ್ಪಿ ಕೂಡ ಚೆನ್ನಾಗಿ ಬಂದಿತ್ತು. ಸೇರಿಯಲ್ನ ಪ್ರಮುಖ ಅಟ್ರಾಕ್ಷನ್‌ ಅಂದ್ರೆ ಅದು ನಾಯಕ ಸಿದ್ದಾರ್ಥ್‌ ಹಾಗೂ ನಾಯಕಿ ಸನ್ನಿಧಿ. ಇವರಿಬ್ಬರ ಜೋಡಿ ನೋಡೋದಕ್ಕೆ ಎಂದೇ ಅದೆಷ್ಟೋ ಜನ ಟಿ.ವಿ ಮುಂದೆ ಕೂರ್ತಾ ಇದ್ರು. ಈ ಇಬ್ಬರೂ ಪಾತ್ರಧಾರಿಗಳು ಕೊನೆವರೆಗೂ ಬದಲಾಗದೇ ಇದ್ದದ್ದೂ ಸಹ ಸೀರಿಯಲ್ಗೆ ಪ್ಲಸ್‌ ಪಾಯಿಂಟ್‌ ಆಯ್ತು. ಕಥೆ ಕೂಡಾ ಬಹಳ ಚೆನ್ನಾಗಿ ಮೂಡಿಬಂದಿತ್ತು.   ಈ ಸೂಪರ್‌ ಹಿಟ್‌ ಧಾರಾವಾಹಿ ಇದೀಗ ಹಿಂದಿಗೆ ರೀಮೇಕ್‌ ಆಗಿದೆ.  ಈ ಹಿಂದೆ ಬೇರೆ ಭಾಷೆಯ ಸೀರಿಯಲ್‌ಗಳು ಕನ್ನಡಕ್ಕೆ ರೀಮೇಕ್‌ ಆಗ್ತಾ ಇದ್ವು ಈಗ ಕನ್ನಡದ ಧಾರಾವಾಹಿ ಹಿಂದಿಗೆ ರೀಮೇಕ್‌ ಆಗಿರೋದು ಕನ್ನಡ ಇಂಡಸ್ಟ್ರಿಗೆ ಹೆಮ್ಮೆಯ ಸಂಗತಿಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿಜಯನಗರ : 2023 ರ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಭಿಮಾನಿಗಳ ಹರಕೆ..

Sat Dec 3 , 2022
ತಮ್ಮ ನೆಚ್ಚಿನ ಶಾಸಕರು ಯಾರಾಗಬೇಕೆಂದು ಆಸೆ ಹೊರಹಾಕಿದ ಅಭಿಮಾನಿಗಳು.. NEXT MLA ಭೀಮಣ್ಣ, ಮುಂದಿನ ಶಾಸಕ ಕೋಡಿಹಳ್ಳಿ ಭೀಮಣ್ಣ ಅಂತ ಅಭಿಮಾನಿಗಳಿಂದ ಹರಕೆ .. ರಥೋತ್ಸವದ ವೇಳೆ ರಥಕ್ಕೆ ಬಾಳೆಹಣ್ಣು ಎಸೆದ ಭಕ್ತರು.. ಬಾಳೆ ಹಣ್ಣಿನ ಮೇಲೆ NEXT MLA ಭೀಮಣ್ಣ ಅಂತ ಬರೆದು ದೇವರಿಗೆ ಸಮರ್ಪಣೆ.. ಕಾನಾಮಡಗು ದಾಸೋಹ ಮಠದ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು.. ಕೂಡ್ಲಿಗಿ ವಿಧಾನ ಸಭೆ ಕ್ಷೇತ್ರದ […]

Advertisement

Wordpress Social Share Plugin powered by Ultimatelysocial