ಚೆನ್ನೈ: ಚೆನ್ನೈನ ಮಡಿಪಕ್ಕಂ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಅವರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನಈ ಕೃತ್ಯ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.ಸೆಲ್ವಂ (46) ಡಿಎಂಕೆಯ 186 ನೇ ವಾರ್ಡ್ ಘಟಕದ ಕಾರ್ಯದರ್ಶಿ ಆಗಿದ್ದರು ಎಂದು ತಿಳಿದುಬಂದಿದೆ.ಸೆಲ್ವಂ ಅವರನ್ನು ರಾತ್ರಿ 9:30 ಕ್ಕೆ ಮಡಿಪಕ್ಕಂನಲ್ಲಿರುವ ಅವರ ನಿವಾಸದ ಹೊರಗೆ ಜನರ ಎದುರೇ ಗ್ಯಾಂಗ್ ಕೊಂದಿದೆ ಎಂದು ಹೇಳಲಾಗಿದೆ. ಹಲ್ಲೆ ನಡೆಸಿದ ಬಳಿಕ ತಂಡ ಪರಾರಿಯಾಗಿದೆ. ಸೆಲ್ವಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಡಿಪಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದು, ಭೀಕರ ಹತ್ಯೆಯ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚುತ್ತಿದ್ದಾರೆ.ಸೆಲ್ವಂ ಅವರು ಈ ವಾರ ಕೊಲೆಯಾದ ಎರಡನೇ ಡಿಎಂಕೆ ಸ್ಥಳೀಯ ಪದಾಧಿಕಾರಿಯಾಗಿದ್ದಾರೆ. ತಿರುನೆಲ್ವೇಲಿಯಲ್ಲಿ ಪೊನ್ನುದಾಸ್ (38) ಅವರನ್ನು ರವಿವಾರ ಹತ್ಯೆ ಮಾಡಲಾಗಿದೆ. ಆತನ ಮೇಲೆ ಕಾರೊಂದು ಹರಿದಿದ್ದು, ನಂತರ ಕಾರಿನಲ್ಲಿದ್ದವರು ಕೆಳಗಿಳಿದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada