ಚೆನ್ನೈ: ಬಹುನಿರೀಕ್ಷಿತ ತಮಿಳು ಸಿನಿಮಾದಲ್ಲಿ ಕ್ರಿಕಟರ್ ಶ್ರೀಶಾಂತ್ ಮತ್ತೆ ಬಣ್ಣ ಹಚ್ಚಿದ್ದಾರೆ. ಕ್ರಿಕೆಟ್ನಿಂದ ದೂರವಾದ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಶಾಂತ್ ಈ ಬಾರಿ, ನಯನತಾರ ಮತ್ತು ಸಮಂತಾ ಜೊತೆ ಕಾಣಿಸಿಕೊಳ್ತಿದ್ದಾರೆ.ನಟನೆ ಬಗ್ಗೆ ಅವರಿಗೆ ತುಂಬ ಉತ್ಸಾಹ ಇದೆ. ಈ ಮೊದಲೇ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದ ಅವರು ಈಗ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೆ ಸ್ಟಾರ್ ನಟ-ನಟಿಯರ ಜೊತೆಗೆ ಅಭಿನಯಿಸುವ ಅವಕಾಶ ಸಿಗುತ್ತಿರುವುದು ವಿಶೇಷ. ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಆಯಕ್ಷನ್-ಕಟ್ ಹೇಳುತ್ತಿರುವ ‘ಕಾತು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಸಮಂತಾ, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಅದೇ ಸಿನಿಮಾದಲ್ಲಿ ಶ್ರೀಶಾಂತ್ ಕೂಡ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರ ಹೇಗಿರಲಿದೆ ಎಂಬ ಕೌತುಕ ಅನೇಕರಿಗೆ ಇತ್ತು. ಅದಕ್ಕೂ ಈಗ ಉತ್ತರ ಸಿಕ್ಕಿದೆ. ಇತ್ತೀಚೆಗೆ ಶ್ರೀಶಾಂತ್ ಅವರು ಹುಟ್ಟುಹಬ್ಬ ಫೆಬ್ರವರಿ 7ರಂದು ಆಚರಿಸಿಕೊಂಡರು. ಆ ಸಲುವಾಗಿ ‘ಕಾದು ವಾಕುಲ ರೆಂಡು ಕಾದಲ್’ ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆ ಪೋಸ್ಟರ್ನಲ್ಲಿ ಶ್ರೀಶಾಂತ್ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಲಾಗಿದೆ. ಮೊಹಮ್ಮದ್ ಮೊಬಿ ಎಂಬ ಪಾತ್ರದಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರೆ. ಅವರ ಸಿನಿಮಾ ಜರ್ನಿಗೆ ಅನೇಕರು ಶುಭ ಕೋರಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada