ಕೊಪ್ಪಳ ಬಿಟ್ಟು ಬಳ್ಳಾರಿಗೆ ಹೋದ ಸಿದ್ದರಾಮಯ್ಯ!

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸಿದ್ದ ವಿಶೇಷ ವಿಮಾನದ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿದೆ. ಯಲಬುರ್ಗಾದಲ್ಲಿ ಕಾರ್ಯಕ್ರಮ ಇದ್ದ ಕಾರಣ ಸಿದ್ದರಾಮಯ್ಯ ಬೆಂಗಳೂರಿನಿಂದ ಕೊಪ್ಪಳದ ಗಿಣಗೇರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಲು ಕೋರಿದ್ದರು.

ಆದರೆ ವಿಶೇಷ ವಿಮಾನದ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿದೆ.

ಯಲಬುರ್ಗಾದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮವಿದೆ. ಇದರ ಜೊತೆಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ವೀರನಗೌಡ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. 2018ರ ಚುನಾವಣೆಯಲ್ಲಿ ವೀರನಗೌಡ ಪಾಟೀಲ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಮೂಲಕ ಯಲಬುರ್ಗಾ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಸೋಲಿಗೆ ವೀರನಗೌಡ ಪಾಟೀಲ್ ಕಾರಣರಾಗಿದ್ದರು. ಪಕ್ಷ ಸೇರ್ಪಡೆ ಹಾಗೂ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರುನಾಡ ಮತಯುದ್ಧಕ್ಕೆ ವೇದಿಕೆ ಸಿದ್ಧಗೊಳ್ತಿದೆ.

Sat Feb 18 , 2023
ಕರುನಾಡ ಮತಯುದ್ಧಕ್ಕೆ ವೇದಿಕೆ ಸಿದ್ಧಗೊಳ್ತಿದೆ. ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಶಸ್ತ್ರಾಭ್ಯಾಸ ನಡೆಸ್ತಿವೆ. ಗೆಲುವಿಗಾಗಿ ಯಾತ್ರೆಗಳ ಮೇಲೆ ಯಾತ್ರೆ ಮಾಡುತ್ತಾ ರಣತಂತ್ರ ರೂಪಿಸ್ತಿವೆ. ಈ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮೂಲಕ ಚುನಾವಣೆಗೆ ಕಾರ್ಯತಂತ್ರ ಹೆಣೆದಿದೆ. ಯುದ್ಧಕ್ಕೂ ಮುನ್ನವೇ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಸಲು ಪ್ಲಾನ್ ಮಾಡಿದೆ. ರಾಜ್ಯದಲ್ಲಿ ಚುನಾವಣಾ ಯುದ್ಧಕ್ಕೆ 3 ಪಕ್ಷಗಳು ಶಸ್ತ್ರಗಳನ್ನ ರೆಡಿಮಾಡುತ್ತಿವೆ. ಮತದಾರರ ಮನ ಗೆಲ್ಲಲು ಭರವಸೆಯ ಅಸ್ತ್ರಗಳ ಬಿಡುತ್ತಿವೆ. ಯಾತ್ರೆಗಳನ್ನ ಮಾಡುತ್ತಾ ಮತ […]

Advertisement

Wordpress Social Share Plugin powered by Ultimatelysocial