ವಿಜಯಪುರ :ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬ.ಸಾಲವಾಡಗಿ ಗ್ರಾಮಕ್ಕೆ ಭೇಟಿ.
ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬ.ಸಾಲವಾಡಗಿ ಗ್ರಾಮ.
ಯಾದಗಿರಿಯಿಂದ ಆಲಮಟ್ಟಿಗೆ ತೆರಳುತ್ತಿರುವ ಮಾರ್ಗಮಧ್ಯದಲ್ಲಿ ಭೇಟಿ.
ಗ್ರಾಮದ ಲಿಂಗಯ್ಯ ಮುತ್ಯಾನ ಗದ್ದಿಗೆಯ ದರ್ಶನ ಪಡೆದು ಆರ್ಶಿವಾದ ಪಡೆದ ಸಿದ್ಧರಾಮಯ್ಯ.
ಗ್ರಾಮಸ್ಥರು, ಅಭಿಮಾನಿಗಳಿಂದ ಸಿದ್ಧರಾಮಯ್ಯನವರಿಗೆ ಶಾಲು ಹೊದಿಸಿ ಸನ್ಮಾನ.
ಸಿದ್ದರಾಮಯ್ಯನವರೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದ ಯುವಕರು.
ಅವರ ಪರ ಘೋಷಣೆ ಕೂಗಿ ಜೈಕಾರ.
ನಂತರ ತಾಳಿಕೋಟೆಯಲ್ಲೂ ಮುಂದುವರಿದ ಅಭಿಮಾನಿಗಳ ಉತ್ಸಾಹ ಸಿದ್ಧರಾಮಯ್ಯ ಪರ ಕ್ರೇಜ್.
ಅವರ ವಾಹನಕ್ಕೆ ಅಡ್ಡಗಟ್ಟಿ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ.
ಅಭಿಮಾನಿಗಳತ್ತ ಕೈಬೀಸಿ ತೆರಳಿದ ಸಿದ್ಧರಾಮಯ್ಯ.
ಇಂದು ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ನಂತರ ಮುದ್ದೇಬಿಹಾಳ ಮಾರ್ಗವಾಗಿ, ಆಲಮಟ್ಟಿಗೆ ತೆರಳಿ ವಾಸ್ತವ್ಯ ಮಾಡಲಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ.
ನಾಳೆ ಬಾದಾಮಿಯಲ್ಲಿ ವಿವಿಧ ಕಾರ್ಯಕ್ರಮ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: