ಸ್ಪೇನ್ ನಲ್ಲಿ ಡಾರ್ಲಿಂಗ್ ಗೆ ಶಸ್ತ್ರಚಿಕಿತ್ಸೆ; ನಟ ಪ್ರಭಾಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಯಾಕೆ ಗೊತ್ತಾ..?

‘ಸಲಾರ್’ ಚಿತ್ರಕ್ಕೆ ಪ್ರಭಾಸ್ ಕೂಡ ವಿಶೇಷ ಆಸ್ಥೆ ವಹಿಸಿದ್ದಾರೆ. ಆದರೆ ಕೆಲವು ಸಮಯದ ಹಿಂದೆ ಅವರು ಚಿತ್ರೀಕರಣದಲ್ಲಿ ಭಾಗವಹಿಸಿ ದ್ದಾಗ ಗಾಯಕ್ಕೆ ತುತ್ತಾಗಿದ್ದರು.‌ ಅದಕ್ಕೆ ಚಿಕಿತ್ಸೆಯನ್ನೂ ನಟ ಪಡೆದಿದ್ದರು. ಆದರೆ ಇದೀಗ ಅವರು ಆ ಗಾಯಕ್ಕೆ ಸಂಪೂರ್ಣ ಚಿಕಿತ್ಸೆ ಪಡೆಯುವ ಸಲುವಾಗಿ ಸ್ಪೇನ್ ಗೆ ತೆರಳಿದ್ದಾರೆ ಎನ್ನಲಾಗಿದೆ.

 

ಬಾರ್ಸಿಲೋನಾದಲ್ಲಿ‌ ಪ್ರಭಾಸ್ ಸಣ್ಣ ಸರ್ಜರಿಗೆ ಒಳಗಾಗಿದ್ದಾರೆ ಎಂದು ಇಟೈಮ್ಸ್ ವರದಿ ಮಾಡಿದೆ.ಸರ್ಜರಿ ಸಣ್ಣದಾದರೂ ಪ್ರಭಾಸ್​ಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ‘ರಾಧೆ ಶ್ಯಾಮ್’ ರಿಲೀಸ್ ನಂತರ ಪ್ರಭಾಸ್ ಅಷ್ಟಾಗಿ ಮಾಧ್ಯಮದ ಮುಂದೆ ಕಾಣಿಸಿಕೊಂಡಿಲ್ಲ. ಚಿತ್ರದ ಬಗ್ಗೆ ಬಂದ ಪ್ರತಿಕ್ರಿಯೆಗಳೂ ಅದಕ್ಕೆ ಕಾರಣವಿರಬಹುದು.

ಆದರೆ ನಟ ವಿದೇಶಕ್ಕೆ ತೆರಳಿ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ನಂತರ ಗಾಯ ಹಾಗೂ ಸರ್ಜರಿಯ ಸಮಾಚಾರ ಬಂದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಪ್ರಭಾಸ್ ಬೇಗ ಗುಣಮುಖರಾಗಿ‌ ಮತ್ತೆ ಮಾಸ್ ಅವತಾರ ತೊಟ್ಟು ತೆರೆಯ ಮೇಲೆ ಮಿಂಚಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಸಂದೇಶ ಹಂಚಿಕೊಳ್ಳುತ್ತಿದ್ದಾರೆ. ಪ್ರಭಾಸ್ ಬತ್ತಳಿಕೆಯಲ್ಲಿ ವಿಭಿನ್ನ ಬಗೆಯ ಚಿತ್ರಗಳಿವೆ. ‘ಸಲಾರ್’ನಲ್ಲಿ ನಟ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಆದಿಪುರುಷ್’ನಲ್ಲಿ ರಾಮನ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ‘ಪ್ರಾಜೆಕ್ಟ್ ಕೆ’, ‘ಸ್ಪಿರಿಟ್’, ‘ಮಾರುತಿ’ ಚಿತ್ರಗಳಲ್ಲಿ ನಟ ಬಣ್ಣಹಚ್ಚಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧ್ಯಪ್ರದೇಶದಲ್ಲಿ ಶಾಖದ ಅಲೆ: ಖಾರ್ಗೋನ್ ಗರಿಷ್ಠ ತಾಪಮಾನ 43 ಡಿಗ್ರಿಗಳನ್ನು ದಾಖಲಿಸುತ್ತದೆ;

Sat Mar 19 , 2022
ಮಧ್ಯಪ್ರದೇಶದ ಐದು ಜಿಲ್ಲೆಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಶಾಖದ ಅಲೆಯು ಶನಿವಾರವೂ ಮುಂದುವರಿಯುತ್ತದೆ ಎಂದು ಐಎಂಡಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಜಿಲ್ಲೆಗಳು ಖಾರ್ಗೋನ್ ಆಗಿದ್ದು, ಇದು 43 ಡಿಗ್ರಿ ಸೆಲ್ಸಿಯಸ್, ನರ್ಮದಾಪುರಂ, ಉಜ್ಜಯಿನಿ, ರತ್ಲಾಮ್ ಮತ್ತು ಧಾರ್‌ನಲ್ಲಿ ರಾಜ್ಯದ ಅತ್ಯಧಿಕ ತಾಪಮಾನವನ್ನು ದಾಖಲಿಸಿದೆ ಎಂದು ಐಎಂಡಿ ಭೋಪಾಲ್ ಕಚೇರಿಯ ಹಿರಿಯ ಹವಾಮಾನ ತಜ್ಞ ಪಿಕೆ ಸಹಾ ಪಿಟಿಐಗೆ ತಿಳಿಸಿದರು. ಪ್ರಾಸಂಗಿಕವಾಗಿ, ನರ್ಮದಾಪುರಂ ಜಿಲ್ಲೆಯು ಸಾತ್ಪುರ ಶ್ರೇಣಿಯಲ್ಲಿ ನೆಲೆಗೊಂಡಿರುವ ರಾಜ್ಯದ ಏಕೈಕ […]

Advertisement

Wordpress Social Share Plugin powered by Ultimatelysocial