ಬೆಂಗಳೂರು: ಹವಾನಿಯಂತ್ರಿತ ‘ಬಿಎಂಟಿಸಿ ವಜ್ರ ಸಾರಿಗೆಬಸ್ ಸಂಚಾರವನ್ನು ಬಿಎಂಟಿಸಿ ಆರಂಭಿಸಿದೆ. ಈಗ ಮುಂದುವರೆದು ಈ ಬಸ್ ಗಳ ಸಂಖ್ಯೆಯನ್ನು ಕೆಲ ಮಾರ್ಗಗಗಳಲ್ಲಿ ಹೆಚ್ಚುಗೊಳಿಸಲಾಗುತ್ತಿದೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬಿಎಂಟಿಸಿ, ಸಾರ್ವಜನಿಕ ಪ್ರಯಾಮಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಬಿಎಂಟಿಸಿ ಒದಗಿಸುತ್ತಿದೆ.ಸಾರ್ವಜನಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ವಜ್ರ ಸಾರಿಗೆಗಳನ್ನು ದಿನಾಂಕ 07-02-2022ರಿಂದ ಜಾರಿಗೆ ಬರುವಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಮಾರಸ್ವಾಮಿ ಲೇಔಟ್, ಕುವೆಂಪು ನಗರ, ವಿಜಯನಗರ ಟಿಟಿಎಂಸಿಯಿಂದ ಕುವೆಂಪು ನಗರಕ್ಕೆ ವಿ-15ಇ, ವಿ-25ಎ ಮತ್ತು ವಿ-60ಇ ಹೊಸ ಮಾರ್ಗಗಳಲ್ಲಿ ಪ್ರಾರಂಭಿಸೋದಾಗಿ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada