ಮೈಸೂರು: ಸಿಎಂ ಇಬ್ರಾಹಿಂನಂತಹ ಜಾತಿವಾದಿ ಯಾರೂ ಇಲ್ಲ. ಯಾವ ಲಿಂಗಾಯತರು ಅವರ ಜೊತೆ ಹೋಗಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.ಇಬ್ರಾಹಿಂರಿಂದ ಅಲಿಂಗ ಚಳುವಳಿ ವಿಚಾವಾಗಿ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಬೆನ್ನಿಗೆ ಯಾರಿದ್ದಾರೆ?ಯಾವ ಲಿಂಗಾಯತರು ಅವರ ಜೊತೆಗೆ ಹೋಗಲ್ಲ. ಅವರು ಏನ್ ಮಾಡಿದ್ದಾರೆ ಅಂತ ಹೋಗಬೇಕು. ಅಲಿಂಗ ಅಂದ ತಕ್ಷಣ ಯಾರೂ ಅವರ ಹಿಂದೆ ಹೋಗಲ್ಲ.ಇಬ್ರಾಹಿಂ ಜಾತಿ ತಲೆಯಲ್ಲಿರುವ ಮನುಷ್ಯ. ಅವರನ್ನ ಜಾತ್ಯಾತೀತ ಅಂತ ಎಲ್ಲಾ ತಿಳಿದುಕೊಳ್ತಾರೆ. ಇಬ್ರಾಹಿಂನಂತಹ ಜಾತಿವಾದಿಗಳು ಯಾರು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: