ಮನರಂಜನೆಯನ್ನೇ ಪ್ರಮುಖ ಜೀವಾಳವಾಗಿರಿಸಿಕೊಂಡಿರುವ “ಓಲ್ಡ್ ಮಾಂಕ್ ” ಚಿತ್ರಕ್ಕೆ ರಾಜ್ಯದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ನಟ ನಿರ್ದೇಶಕ ಶ್ರೀನಿ ಅವರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.
ಅದರಲ್ಲಿಯೂ ಚಿತ್ರ ಬೆಂಗಳೂರು,ಶಿವಮೊಗ್ಗ, ಮೈಸೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ ಅತ್ತುತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. ಇದು ಸಹಜವಾಗಿಯೇ ಚಿತ್ರತಂಡ ಮುಖದಲ್ಲಿ ಇನ್ನಷ್ಟು ಖುಷಿ ಹೆಚ್ಚಾಗಿದೆ.
ಓಲ್ಡ್ ಮಾಂಕ್ ಮೂರನೇ ವಾರ ಪೂರ್ಣಗೊಳಿಸಿ ನಾಲ್ಕನೇ ವಾರಕ್ಕೆ ಪ್ರವೃಶಿಸಲು ಸಜ್ಜಾಗಿದೆ. ಇದು ಚಿತ್ರ ತಂಡದಲ್ಲು ಖುಚಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಮಲ್ಟಿಫ್ಲೆಕ್ಸ್ ನಲ್ಲಿ ಹಾಗು
ಚಿತ್ರ ಉತ್ತಮ ಪ್ತದರ್ಶನ ಕಾಣಿತ್ತಿದ್ದರೂ ಹಲವು ಕಡೆ ರಾಜ್ಯದ ಹಲವು ಭಾಗದಲ್ಲಿ ಚಿತ್ರಕ್ಕೆ ಚಿತ್ರಮಂದಿರ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಇದು ಅವರಲ್ಲಿ ಬೇಸರ ಮೂಡಿಸಿದೆ.
ಎರಡು ವರ್ಷ ಕೊರೊನಾ ಸೋಂಕಿನ ಸಮಯದಲ್ಲಿ ಯಾವುದೇ ಚಿತ್ರಗಳು ತೆರೆಗೆ ಬಾರದ ಸಮಯದಲ್ಲಿ ಚಿತ್ರಮಂದಿರಕ್ಕೆ ಚಿತ್ರಗಳು ಬಂದರೆ ಸಾಕು ಎಂದು ಚಾತಕ ಪಕ್ಷಿಗಳಂತೆ ಚಿತ್ರಮಂದಿರದ ಮಾಲೀಕರು ಕಾಯುತ್ತಿದ್ದರು. ಇದೀಗ ಚಿತ್ರಮಂದಿರಕ್ಕೆ ಬಂದರೂ ಚಿತ್ರಮಂದಿರ ನೀಡಲು ಮೀನಾ ಮೇಷ ಎಣಿಸುತ್ತಿದ್ದಾರೆ ಇದು ಬೇಸರ ತರಿಸಿದೆ ಎಂದು ತಮ್ಮ ಸತೃಪ್ತಿ ಅಸಮಾಧಾನ ಹೊರಹಾಕಿದ್ದಾರೆ ನಿರ್ದೇಶಕ ಕಮ್ ನಟ ಶ್ರೀನಿ.
ಮಲ್ಟಿ ಫ್ಲೆಕ್ಸ್ ನಲ್ಲಿ ಬೆಳಗ್ಗೆ 9 ಗಂಟೆಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಯಾರು ಬರ್ತಾರೆ. ಮಲ್ಟಿಫ್ಲೆಕ್ಸ್ ಗಳ ಜೊತೆ ಗುದ್ದಾಡಿ ಸಮಯ ಬದಲಾವಣೆ ಮಾಡಿಕೊಂಡಿದ್ದೇವೆ. ಇದೀಗ ಮೂರನೇ ವಾರ ಪೂರ್ಣಗೊಳಿಸುವತ್ತ ಹೆಜ್ಜೆ ಹಾಕಿದೆ. ಈ ವಾರ ಮುಗಿದರೆ ನಾವು ಹಾಕಿದ ಬಂಡವಾಳ ಸೇಫ್ ಎಂದರು.
ಹೊಸ ಚಿತ್ರದ ಕಥೆ ಸಿದ್ದ ಮಾಡಿಕೊಳ್ಳುತ್ತಿದ್ದು ಸದ್ಯದಲ್ಲಿಯೇ ಪ್ರಕಟಿಸಲಾಗುವುದು. ಈ ಬಾರಿ ವಿಭಿನ್ನ ಕಥೆಯನ್ನು ಮುಂದಿಟ್ಡುಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂದರು ಶ್ರೀನಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: